ಹರೇ ಶ್ರೀನಿವಾಸ
ನಾರಾಯಣ ವರ್ಮ
(ಇದನ್ನು ಮೊದಲು ಅಂದು ಆಮೇಲೆ ಲಕ್ಷ್ಮೀ - ಹೃದಯ ಅಂದು ಮತ್ತೆ ನಾರಾಯಣ ವರ್ಮ ಅಂದರೆ ವಿಶೇಷ ಫಲ. ಶುಕ್ರವಾರ ತಪ್ಪದೇ ಅನ್ನಬೇಕು,)
ಸಕಲ ಋಷಿಗಳಲ್ಲಿ ಹರಿ ನಮ್ಮ ಸ್ವಾಮಿಯಾಗಿ ರಕ್ಷಿಸಿ | ಜಲದು ಮಚ್ಚಾವತಾರನಾಗಿ | ಸ್ಥಳದಲ್ಲಿ ವಾಮನನಾಗಿ ರಕ್ಷಿಸು ನಿಮ್ಮ ನೆನೆವರಾ | ಆಕಾಶದಲ್ಲಿ ತ್ರಿವಿಕ್ರಮನಾಗಿ ರಕ್ಷಿಸು ನಿಮ್ಮ ನೆನೆವರಾ | ಪರ್ವತಾಗ್ರಹದಲ್ಲಿ ವರಶುರಾಮನಾಗಿ ರಕ್ಷಿಸು | ಪರದೇಶದಲ್ಲಿ ರಾಮಚಂದ್ರನಾಗಿ ರಕ್ಷಿಸು. ನಿಮ್ಮ ನೆನೆವರಾ |ಆಶ್ರಯದಲ್ಲಿ ನರನಾರಾಯಣನಾಗಿ ರಕ್ಷಿಸು | ಆಯೋಗ್ಯರಲ್ಲಿ ದತ್ತಾತ್ರೇಯನಾಗಿ ರಕ್ಷಿಸು | ಕರ್ಮ ಬಂಧುಗಳೆಲ್ಲ ಕಳೆದು ರಕ್ಷಿಸು ಕಪಿಲ ಮೂರ್ತಿಯಾಗಿ | ಪ್ರಾತಃ ಕಾಲದಲ್ಲಿ ಕೇಶವ ನಮ್ಮ ರಕ್ಷಿಸು | ಸಾಯಂಕಾಲದಲ್ಲಿ ಗೋವಿಂದ ನಮ್ಮ ರಕ್ಷಿಸು | ಅಪರಾಹ್ನ ಕಾಲಗಳೆಲ್ಲ ಕಳೆದು ರಕ್ಷಿಸು | ನಮ್ಮ ಸಕಲ ಕಾಲಗಳಲ್ಲಿ ನರಕದಿಂದ ಕೂರ್ಮನಾಗಿ ರಕ್ಷಿಸು | ವಿಪತ್ತಿನಿಂದ ಧನ್ವಂತರಿ ರಕ್ಷಿಸು | ಅನ್ಯ ದೇವತೆ ಭಜನೆ ಕಳೆದು ರಕ್ಷಿಸಯ್ಯ ಶ್ರೀ ಕೃಷ್ಣಾ ಮೂರುತಿಯಾಗಿ ಅಜ್ಞಾನ
ವಿಷಯಗಳ ಕಳೆದು ರಕ್ಷಿಸು ವೇದವ್ಯಾಸ ಮೂರ್ತಿಯಾಗಿ ಕೃಷ್ಣನ ಶಂಖವೆ ನಿಮ್ಮ ಧನಿದುರಿ ರಾಕ್ಷಸರ ಎದೆ ಒಡೆಸಿ, ಭಯಬಡಿಸಿ ಲಯವನೆ ಮಾಡಿಸಿ ಪೂತಗಂಧರ್ವರು ಕೂತ್ಕಾಂಡ ತೋರಿಸಲು ವಿಷ್ಣುಗದೆ ರಾಕ್ಷಸರ ಒಡೆದು ಚೂರ್ಣವ ಮಾಡಿ | ಕಿಡಿಗಳಂತೆ ಭೂಮಿ ಮೇಲೆ ಆಧರಿಸಿ II ಶತಚಂದ್ರ ಪ್ರಭೆಯಂತೆ ಹೊಳೆವ ಹರಿಯು ನಮ್ಮ ಮತಿವಂತರು ವೈರಿಗಳ ಕಣ್ಣಿಗೆ ಕಾಣಬಾರದು ಮಾಡಿ | ತೋರಿಸಿ ತಮ್ಮ ದಿವ್ಯತೇಜಗಳ | 'ಧರ್ಮ' ವಿಷಯದಲಿ ಹಯಗ್ರೀವನಾಗಿ ರಕ್ಷಿಸು | ಮಧ್ಯಾಹ್ನ ಕಾಲದಲ್ಲಿ ಮಧುಸೂದನನಾಗಿ | ಸಾಯಂಕಾಲದಲಿ ಶ್ರೀವತ್ಸ ಮೂರ್ತಿಯಾಗಿ | ಉಷಃ ಕಾಲದಲಿ ಜನಾರ್ಧನನಾಗಿ ರಕ್ಷಿಸು | ಅರ್ಧರಾತ್ರಿಯಲ್ಲಿ ಹೃಷಿಕೇಶನಾಗಿ | ಅಪರಾತ್ರಿಯಲಿ ರಕ್ಷಿಸಯ್ಯ ಶ್ರೀವತ್ಸಮೂರ್ತಿಯಾಗಿ | ಸಾಮವೇದಕೆ ಅಭಿಮಾನಿಯಾದ ಗರುಡವಾಹನನೆ ಸಲುಹೆನ್ನ ವಿಷದ ಭಯಗಳ ಬಿಡಿಸಿ | ಕೃಷ್ಣಮುಕುಟಾಧರನೆ ರಕ್ಷಿಸೊ ನಮ್ಮನ್ನ ಪ್ರಾಣೇಂದ್ರಿಯದಿಂದ | ಬುದ್ದಿಯಿಂದ ದಿಕ್ಕು ರಕ್ಷಿಸೊ ನಮ್ಮನ್ನ ಪ್ರಾಣೇಂದ್ರಿಯದಿಂದ ಬುದ್ದಿಯಿಂದ ದಿಕ್ಕು ದಿಕ್ಕುಗಳಲ್ಲಿ | ನಾರಸಿಂಹಮೂರ್ತಿಯಾಗಿ | ನಾರಸಿಂಹನಾದಗಳಿಂದ ಎಲ್ಲ ಪರಿಯಿಂದ ಭಕ್ತರನೆಲ್ಲ ನರಹರಿ * ಇದ್ದು ರಕ್ಷಿಸೊ | ಗುರುಮಧ್ವರಾಯರ ಗುರು ವಿಶ್ವವ್ಯಾಪಕರ ಸುವಿಷ್ಣು ವೈಷ್ಣವರ ಮಗನಂತೆ ನಿಮ್ಮ ಸುನಾಮ ಎಂದು ಪಾಡಿಸುಖಿಯಾಗಿ ಜಮದಗ್ನಿ ವತ್ಸ, ಪ್ರಹ್ಲಾದವರದ ಅಸುರರ ಗೆಲಿದ ಬಲರಾಮ ಜಾನಕಿವಲ್ಲಭ ಜಯ ಜಯರಾಮ ನಿತ್ಯವೈಕುಂಠ ನಿಜ ಗೋವಿಂದ, ಅಂಬರೀಷರಾಯಗ ವರಗಳ ಕೊಟ್ಟನಂಬಿದ ಭಕ್ತರಿಗೆ ಅಭಯ ಕೊಟ್ಟಿಯಶೋದೆಯ ಮನ ಉದ್ದರಿಸಿದ ಹಯವದನ ರಕ್ಷಿಸು |
ಷಷ್ಟಸ್ಕಂದ ಅಷ್ಟಮೋಧ್ಯಾಯ ಇಂದ್ರನಿಗೆ ಉಪದೇಶಿಸಿದ ನಾರಾಯಣ ವರ್ಮ ಸಂಪೂರ್ಣಂ |
ಲಕ್ಷ್ಮೀ ಹೃದಯಂ
ಶ್ರೀದೇವಿ ತಾನು ಶ್ರೀರಾಮನ ಮನೆಯಲ್ಲಿ ಆದಿ ಅಂತ್ಯಗಳಿಲ್ಲದಿರಲು, ಚೌದ್ಯ ಸುಖ ರೂಪದಿಂದ ಅವಳಿಗೆ ವೇದವಾಲಿಗಳ ಓದುತ್ತಿರಲು ಅವಳಿಂದ ಹರಿಯು ಮೂರು ಮನೆಗಳಿಪ್ಪಾಲಯಕತನ ಭಯವಿಲ್ಲ. ಮೊದಲೆ ಉದಕವಿಲ್ಲ. ಆದಕಾರಣದಿಂದ ಮುದಿತಾನಾದಳು. ಆಚ್ಯುತಗೆ ಅಂಬುಧಿಯಾದಳು, ಆಗ ಮಹಾ ಲಕುಮಿ ಅಂಬರದ ಆಭರಣವಾದಳು, ಪೊಂಬಣ್ಣದ ಆಲದೆಲೆಯಾದಳು ಏನೆಂಬೆ ಇವಳ ಸಾಹಸಕೆ, ಶ್ರೀ ಭೂ - ದುರ್ಗೆಯರ ಆಲಿಸಿದನು ಹರಿಯು ತಾ ಆಲದೆಲೆಯ ಮೇಲೆ ಮಲಗಿದನು. ಅಚ್ಯುತನ ಹೃದಯದಲೆ ಲಿಂಗವಿಶಿಷ್ಠರಾದ ಇನಿತು ಜೀವರ ಹಿಡಿ ತುಂಬಾಕೊಂಡು ತನಯನ ನೂರು ವರ್ಷ ಪರಿಯಂತದಿ ವನಜಾಕ್ಷ ವಟಪತ್ರಶಯನನಾಗಿ ಜನರೆಲ್ಲ ತಮ್ಮ ಗತಿಗೆ ತಕ್ಕ
ಸಾಧನವ * ಸಾಧಿಸಿಕೊಳ್ಳಲೆಂದು ಕರುಣೆ ಪುನರಪಿ ಸೃಷ್ಟಿಯ ಮಾಡವನೆಂದು ಲಾಲನೆಗೆ ಪಕೃತಿಯ ಮಮತೆ ಇತ್ತು ಗುಣತ್ರಯಾತ್ಮಕ ಸೂಕ್ಷ್ಮ ತತ್ವರಾಶಿಯ ಜೀವರನು ಸೃಜಿಸಿದ ಹಯವದನನು ||
ಶ್ರೀ ಕೃಷ್ಣಾರ್ಪಣ ಮಸ್ತು
Негізгі бет 554 ವೈಕುಂಠ ರಂಗೋಲಿ?/Vaikunta rangoli
Пікірлер: 41