ಡಾ. ಸತ್ಯನಾರಾಯಣ ಭಟ್ ಪಿ. ಅವರು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳ್ಳಮಂಜದವರು. ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ಹಾಗೂ ಚಿನ್ನದ ಪದಕ ಪಡೆದಿರುವುದು ಅವರ ಪ್ರತಿಭೆಗೆ ಸಾಕ್ಷಿ.
1980ರಲ್ಲಿ ಸಸ್ಯಶಾಸ್ತ್ರದಲ್ಲಿ ಪಿಹೆಚ್ .ಡಿ ಪದವಿ. ಅಂಕಣ ಬರಹಗಳನ್ನು ಸೇರಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ಧಾರೆ. ಅವರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ.
ಇಂಗ್ಲೀಷ್ ಹಾಗೂ ಕನ್ನಡದಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು ವಿಶ್ವದ ಹದಿನಾರು ದೇಶಗಳಲ್ಲಿ ಸಸ್ಯ ಮತ್ತು ಜೀವ ಜಾಲ ಪ್ರಭೇದ, ಜನಜೀವನವನ್ನು ಅಧ್ಯಯನ ಮಾಡಿದ್ದಾರೆ. `ಆಯುರ್ವೇದ ಪಿತಾಮಹ : ಪಿ ಟಿ ಕೆ ನಂಬೀಶನ್’ ಅವರ ಬದುಕು ಸಾಧನೆ ಕುರಿತ ಕೃತಿ ಬರೆದಿದ್ಧಾರೆ.
ಆಯುರ್ವೇದ ವೈದ್ಯ, ಆಯುರ್ವೇದ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ, ಎಕಮೂಲಿಕಾ ಚಿಕಿತ್ಸೆಯ ಪರಿಣಿತ, ಈಗ ಕಳೆದ ಕೆಲವು ವರ್ಷಗಳಿಂದ ಪೂರ್ಣ ಪ್ರಮಾಣದ ಕೃಷಿಕರಾಗಿರುವ ಡಾ. ಸತ್ಯನಾರಾಯಣ ಭಟ್ಟರ ಜೊತೆ ಅವರ ತ್ರಿಭುವನದಲ್ಲಿ 'ಮಾಳ ಸುತ್ತಿನ ಮಾತುಕತೆ'ಯ ಮೊದಲ ಕಂತು ಇಲ್ಲಿದೆ
Негізгі бет A Doctor turned Farmer | Dr P Satyanarayana Bhat | Tribhuvana, Mala (DK) | Episode 1
Пікірлер: 9