ಸೆ.2ರಿಂದ ಬೆಂಗಳೂರು ಉತ್ತರ ವಿವಿ ಘಟಿಕೋತ್ಸವ ಪ್ರಥಮ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ 2
ಕೋಲಾರ: ಬೆಂಗಳೂರು ಉತ್ತರ ವಿವಿ ನಾಲ್ಕನೇ
ಘಟಕೋತ್ಸವ ಸೆ. 2ರಂದು ಬೆಳಗ್ಗೆ 11 ಗಂಟೆಗೆ ನಡೆಯ ಲಿದ್ದು, ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಲ್ಲಿ ಪ್ರಥಮ ಬ್ಯಾಂಕ್ ಗಳಿಸಿದ 44 ವಿದ್ಯಾರ್ಥಿಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಪದವಿ ಪ್ರದಾನ ಮಾಡುವರು ಎಂದು ವಿ.ವಿಯ ಕುಲಪತಿ ಡಾ.ನಿರಂಜನ ವಾನಳ್ಳಿ ಅವರು ತಿಳಿಸಿದರು.
ವಿವಿಯ ನಾಲ್ಕನೇ ಘಟಿಕೋತ್ಸವದ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು, ಘಟಿಕೋತ್ಸವ ಭಾಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಪಕರಾದ ಡಾ. ಕೆ. ಈರೇಶಿ ಮಾಡಲಿದ್ದಾರೆ ಎಂದು ತಿಳಿಸಿದರು. ಉತ್ತರ ವಿವಿ 2018-19ರಲ್ಲಿ ಆರಂಭವಾದ ನಂತರ ನಡೆಯುತ್ತಿರುವ ನಾಲ್ಕನೇ ಘಟಿಕೋತ್ಸವವಾಗಿದೆ ಎಂದು ತಿಳಿಸಿದರು. ಕುಲಸಚಿವರು ಬೆಂ.ಉ.ವಿ.ವಿಯಲ್ಲಿ ಒಟ್ಟು 31 ಕೋರ್ಸ್ಗಳಿದು, ಅದರಲ್ಲಿ ಈ ವರ್ಷ ವಿವಿಧ ಪದವಿ ಗಳಲ್ಲಿ 44 ಮಂದಿ ಪ್ರಥಮ ರಾಂಕ್ ಗಳಿಸಿದ ವಿದ್ಯಾರ್ಥಿ ಗಳಿಗೆ ಚಿನ್ನದ ಪದಕ, ಪದವಿಯನ್ನು ರಾಜ್ಯಪಾಲರು ಪ್ರದಾನ ಮಾಡುವರು ಎಂದು ತಿಳಿಸಿದರು.
ಈ ಬಾರಿ ನಾಟಕ ಹಾಗೂ ಜಾನಪದ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ಕೋಲಾರ ಜಿಲ್ಲೆಯ ಬಿ.ವಿ.ವೆಂಕಟಗಿರಿಯಪ್ಪ, ವಾಸ್ತುಶಿಲ್ಪ ಶಿಕ್ಷಣಕ್ಕೆ ನೀಡಿದ
ಕೊಡುಗೆಗಾಗಿ ಪ್ರೊ.ಕೆ. ಎಸ್ ಅನಂತಕೃಷ್ಣ ಹಾಗೂ ವೈದ್ಯಕೀಯ ಮತ್ತು ಸಮಾಜಸೇವೆ ಯನ್ನು ಗುರುತಿಸಿ ವೈದೇಹಿ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರು ಡಿ. ಎ. ಕಲ್ಪಜಾ ಅವರುಗಳಿಗೆ ಗೌರವ ಡಾಕ್ಟರೆಟ್ ನೀಡಲಾಗುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಸ್ನಾತಕ ವಿಭಾಗದಲ್ಲಿ 20784, ಸ್ನಾತಕೋತ್ತರ ವಿಭಾಗದಲ್ಲಿ 3017, ಬಿಎಡ್ ಬಿಪಿಎಡ್ ವಿಭಾಗದಲ್ಲಿ 1813 ಹಾಗೂ ಸ್ವಾಯತ್ತ ಕಾಲೇಜುಗಳ 3538 ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 29152 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.
ಬಂಗಾರದ ಪದಕ ವಿಜೇತರು: ಸ್ನಾತಕೋತ್ತರ ವಿಭಾಗ: ಎಂ.ಆರ್. ಮಹಾಲಕ್ಷ್ಮಿ, ವಿನಯ್ ಕುಮಾರ್ ಟಿ. ಎಸ್., ಎಸ್.ಆರ್. ಹರೀಶ್ ಕುಮಾರ್, ಎ.ರು, ಜಿ.ದಿವ್ಯ, ಎ.ಜಗದೀಶ್, ಎಂ.ಆರ್.ರಮ್ಮ, ಎನ್. ಶಿವಮ್ಮ, ಎಂ.ಐಶರ್ಯ, ಕೆ.ವಿ. ನವೀನ್ ಕುಮಾರ್, ಡಿ.ಕೆ ವಾಣಿಶ್ರೀ, ಸಿ.ಎನ್. ತನುಶ್ರೀ, ಜವೇರಿಯಾ ಮೊಹಮ್ಮದಿ, ಕುಪ್ಪೆ ಬಿ.ನಾರಾಯಣನ್, ಬಿ.ವಿ. ಶ್ರೀ
ಮತಿ, ನಮಿತಾ, ಎಂ.ಗಾಯತ್ರಿ, ಸೈರ್ನಿಮ ಭಂದರಿ, ಸ್ನೇಹ ರೋಜೈಲಿನ ಆಂತೋನಿ, ಜಿ.ಅಭಿನ್ ಹರ್ಷಿತ, ಶ್ರೀವಿದ್ಯ ಶ್ರೀಧರ್ಮಮೂರ್ತಿ, ಅರ್ಪ ಶಾಜ್, ಅನಿತ ಎಸ್., ಎನ್. ಆಶಾ, ಕೆ.ಬಿ. ಶ್ರೀ ಪೃಥ್ವಿ, ಡಿ.ಧನಲಕ್ಷ್ಮಿ
ಪ್ರವಾಸೋದ್ಯಮ ಮತ್ತು ಪ್ರಮಾಣ ನಿರ್ವಹಣೆ: ಕಾರ್ತಿಕ್.ಎಸ್., ಶಿಕ್ಷಣ ಸ್ನಾತಕೋತ್ತರ: ಕೆ.ಎಸ್. ನಮಿತ ಹಾಗೂ ದೈಹಿಕ ಶಿಕ್ಷಣ ಸ್ನಾತಕೋತ್ತರ: ಸಂದೀಪ್ ಕುಮಾರ್.
ಪದವಿ ವಿಭಾಗ: ಜಿ.ನಾಗಮಣಿ, ಕಸಿರೆಡ್ಡಿ ನಂದಿನಿ, ಸುರಭಿ ಗುಪ್ತ, ಆರ್.ಸಮ್ಮಿನ್ ಹಾತಿಮ, ಶ್ರೀರಾಗ್ ನೈರ್, ಡಿ. ಕಾವ್ಯಶ್ರೀ, ಜಿ.ವರ್ಷ, ಕುಮಾರಿ ರಸ್ತೆ, ಶುವಂಗಿ ಸಹ, ಜೆ.ಎಸ್. ನಾಗವೇಣಿ, ಸಬ ಸಹಿರ್, ಮೋನಿಕ ನಾಗರಕೋಟಿ, ಶಾಶ್ವತ ಲಹಿರಿ, ಕೆಬಿತ ಭಗುಥಿ, ಎಸ್. ನಿತಿನ್ ಈ ವಿದ್ಯಾರ್ಥಿಗಳಿಗೆ ಘಟಕೋತ್ತ ವ ದಿನದಂದು ಘನತೇವೆತ್ತ ರಾಜ್ಯ ಪಾಲರಿಂದ ಬಂಗಾರದ ಫದಕವನ್ನು ಪ್ರಧಾನ ಮಾಡಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.
Негізгі бет ಬೆಂಗಳೂರುವಿಶ್ವವಿದ್ಯಾಲಯದವಾಣಿಜ್ಯಶಾಸ್ತ್ರ ವಿಭಾಗದನಿವೃತ್ತಪ್ರಾಧ್ಯಪಕರಾದ ಡಾ.ಕೆ.ಈರೇಶಿ ಮಾಡಲಿದ್ದಾರೆ ಎಂದುತಿಳಿಸಿದರು
Пікірлер