ಗೌತಮ ಬುದ್ದ ಜ್ಞಾನೋದಯವಾಗಿ ಸನಾತನದಲ್ಲಿ ಉಳಿದು ಅದರ ಸಿದ್ದಾಂತವನ್ನು ಬೆಳೆಸುವ ಬದಲು ಅದರ ತತ್ವಗಳನ್ನು ವಿರೋಧಿಸಿ ಮತ್ತೊಂದು ಪಂತವನ್ನು ಆರಂಭಿಸಿದ್ದು ಬುದ್ದಿಹೀನತೆಯೇ?
ಸ್ವತಃ ಬ್ರಾಹ್ಮಣನೇ ಆಗಿದ್ದರೂ ಸಹಾ ತನ್ನ ಸನಾತನದಲ್ಲಿ ಮುಂದುವರೆಯದೆ ಅದನ್ನು ವ್ಯತಿರೇಕಿಸಿ ಪ್ರಶ್ನಿಸಿ, ವಿಶ್ವದಲ್ಲೇ ಪ್ರಪ್ರಥಮ ವಿಚಾರಮಂಟಪ ಸ್ಥಾಪಿಸಿ, ವಿಷಯ ವಿನಿಮಯಗಳ ಸ್ವಾತಂತ್ರ್ಯವನ್ನು ನೀಡಿದ ಮಾನವೀಯ ಮೌಲ್ಯಗಳನ್ನು ಸರಳ ಸವಿಗನ್ನಡಲ್ಲಿ ತಿಳಿಸಿದ, ಬಸವಣ್ಣ ಬಸವಣ್ಣನಿಗಿಂತಾ ನಾವು ನೀವು ವಿಚಾರವಂತರೇ?
ತನ್ನನ್ನು ಶೂದ್ರನೆಂಬ ಹಣೆಪಟ್ಟಿಯಲ್ಲಿ ಅದುಮಿಟ್ಟು ಅಂಧಕಾರದ ಅಧಿಪತ್ಯದಲ್ಲಿ ಅಹಂಕಾರದಿಂದ ಮೆರೆಯುತ್ತಾ ಇದ್ದ ಸನಾತನದ ನ್ಯಾಯಗಳ ಹೆಸರಿನ ಅನ್ಯಾಯಗಳನ್ನು ಬಹಿರಂಗಪಡಿಸಿ, ಕ್ರಾಂತಿಯನ್ನು ಆರಂಭಿಸಿ, ವಿಶ್ವದ ಸಕಲ ದೇಶಗಳ ಸಂವಿಧಾನಗಳಲ್ಲಿ ಅತ್ಯಂತ ಬೃಹತ್ ಪ್ರಜಾಪ್ರಭುತ್ವವುಳ್ಳ ಭಾರತಕ್ಕೆ ನ್ಯಾಯ ನೀತಿಗಳನ್ನು ಬರೆದು ಕೊಟ್ಟು, ಸನಾತನವನ್ನು ಹೇಳ ಹೆಸರಿಲ್ಲದೆ ಕಿತ್ತೆಸೆದ ಅಂಬೇಡ್ಕರ್, ತಿಳುವಳಿಕೆ ಇಲ್ಲದವರೇ?
ಇವರೆಲ್ಲಾ ಸನಾತನವನ್ನು ತ್ಯಜಿಸಿದ್ದು ಸಾಲದೆ, ಮತಾಂತರಗೊಂಡಿದ್ದೂ ಅಲ್ಲದೆ, ಸನಾತನ ವಿರುದ್ದ ಸಿಡಿದೆದ್ದ ಕಿರಣಗಳಾದದ್ದು ಯಾಕೆ?
Follow us on social media for updates and exclusive content:
Facebook: facebook.com/BSC4CHRIST
Instagram: instagram.com/perfectbiblestudy
Twitter: twitter.com/BereansInBible
Негізгі бет ಬುದ್ದ, ವಿಶ್ವ ಮಾನವ ಬಸವಣ್ಣ, ಸಂವಿಧಾನಶಿಲ್ಪಿ ಅಂಬೇಡ್ಕರ್, ಸನಾತನವನ್ನು ತ್ಯಜಿಸಿದ್ದು ಯಾಕೆ?
Пікірлер: 7