ಚಿಂತೆ & ಒತ್ತಡದಿಂದ ಹೊರಬರುವುದು ಹೇಗೆ? | Stress & Distress | Dr B M Hegde | Nimma Arogya Nimma Kaiyalli | Saral Jeevan
ಪೀಪಲ್ಸ್ ಡಾಕ್ಟರ್ ಎಂದೇ ಖ್ಯಾತರಾಗಿರುವ ಡಾ ಬಿ ಎಮ್ ಹೆಗ್ಡೆಯವರು ತಮ್ಮ ಅಪಾರ ವೈದ್ಯಕೀಯ ಜ್ಞಾನ, ಅನುಭವಗಳಿಂದ ಜನರಿಗೆ ಆಪ್ತರಾದವರು.
ಇಂದಿನ ಸಮಾಜದಲ್ಲಿ ಮನುಷ್ಯನಿಗೆ ಸುಖ- ಸಂಪತ್ತು, ಸೌಕರ್ಯಗಳು ಹೆಚ್ಚಾದಂತೆ ಆತನ ಆರೋಗ್ಯ ಸ್ಥಿತಿಯೂ ಹದಗೆಡುತ್ತಿದೆ. ಆರೋಗ್ಯ ಹದಗೆಡಲು ಒತ್ತಡವೂ ಮುಖ್ಯ ಕಾರಣವಾಗುತ್ತದೆ.
ಒತ್ತಡಗಳಿಗೆ ಒಳಗಾಗುವ ವ್ಯಕ್ತಿಯು ಮಾನಸಿಕವಾಗಿ ಜರ್ಝರಿತನಾಗುವುದು ಮಾತ್ರವಲ್ಲದೆ, ದೈಹಿಕವಾಗಿಯೂ ಕುಂಠಿತಗೊಳ್ಳುತ್ತಾನೆ. ವ್ಯಕ್ತಿಯೊಬ್ಬನ ಒತ್ತಡವು ಆತನ/ಆಕೆಯ ಮೇಲಷ್ಟೇ ಪರಿಣಾಮ ಬೀರದೆ ಕುಟುಂಬ, ಕಚೇರಿ, ಸಮಾಜದ ಮೇಲೂ ಪರಿಣಾಮ ಬೀರುವುದನ್ನು ಗಮನಿಸಬಹುದು. ಇದಕ್ಕೆ ಪೂರಕವಾಗಿ ಸನ್ನಿವೇಶವೊಂದನ್ನು ನೆನಪಿಸಿಕೊಳ್ಳಬಹುದು.
ಆಧುನಿಕ ಹಾಗೂ ಧಾವಂತದ ಬದುಕಿನಲ್ಲಿ ಒತ್ತಡಗಳು ಸರ್ವೇ ಸಾಮಾನ್ಯ. ಕುಟುಂಬ, ಮನೆ, ಕೆಲಸ, ಕಚೇರಿ ಹೀಗೆ ಹಲವಾರು ವಿಚಾರಗಳ ಬಗ್ಗೆ ಯೋಚನೆಗಳು ಒಂದರ ಮೇಲೆ ಒಂದರಂತೆ ಬರುತ್ತಲೇ ಇರುತ್ತವೆ. ಎಲ್ಲವನ್ನೂ ಸಂಭಾಳಿಸಿಕೊಂಡು ನಿಧಾನವಾಗಿ ಕಾರ್ಯನಿರ್ವಹಿಸಬೇಕು. ಯಾವುದಕ್ಕೆ ಮೊದಲು, ಎಷ್ಟು ಆದ್ಯತೆ ನೀಡಬೇಕು ಎಂಬಿತ್ಯಾದಿಗಳನ್ನು ಮೊದಲೇ ನಿರ್ಧರಿಸಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದಾಗ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಹೀಗೆ ಒತ್ತಡ ಅಥವಾ ಸ್ಟ್ರೆಸ್ ಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಡಾ ಬಿ ಎಮ್ ಹೆಗ್ಡೆಯವರು ಹಂಚಿಕೊಂಡಿದ್ದಾರೆ.
#drbmhegde #nimmaarogyanimmakaiyalli #saraljeevan #ಸರಳಜೀವನ #BMHegde #ಆರೋಗ್ಯ
Subscribe to Saral Jeevan Hindi:
/ @saraljeevanhindi1409
Негізгі бет ಚಿಂತೆ & ಒತ್ತಡದಿಂದ ಹೊರಬರುವುದು ಹೇಗೆ? | Stress & Distress | Dr B M Hegde | Nimma Arogya Nimma Kaiyalli
Пікірлер: 249