ಈ ಸಲದ ಚುನಾವಣೆ ಟಿಪ್ಪು ಸುಲ್ತಾನ್ ವರ್ಸಸ್ ಒಡೆಯರ್, ಮೂಡಲಬಾಗಿಲಿನ ಹನುಮ ವರ್ಸಸ್ ಮುಲ್ಲಾ ಸಾಬಿಯ ನಡುವೆ ನಡೆಯುವ ಚುನಾವಣೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ಮಂಡ್ಯದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ನಮ್ಮ ದೇಹದಲ್ಲಿ ಹರಿಯುತ್ತಿರೋದು ಟಿಪ್ಪು ಅಪ್ಪನ ರಕ್ತ ಅಲ್ಲ, ಹುರಿಗೌಡ, ದೊಡ್ಡನಂಜೇಗೌಡ ಅವರ ರಕ್ತ ಹರಿಯುತ್ತದೆ. ಅವರ ಪ್ರತಿಮೆ ನಿರ್ಮಾಣ ಮಾಡಿ ಇಡೀ ದೇಶಕ್ಕೆ ಅವರ ಸಾಧನೆಯನ್ನು ಪ್ರಸ್ತುತಪಡಿಸಬೇಕು ಎಂದು ಹೇಳಿದರು.
ದತ್ತ ಪೀಠಕ್ಕೆ ನ್ಯಾಯ ಕೊಟ್ಟಿದ್ದೇವೆ. ಮೂಡಲಬಾಗಿಲಿನ ಹನುಮಪ್ಪನಿಗೆ ನ್ಯಾಯ ಕೊಡುತ್ತೇವೆ. ನೀವು ಹಾಕುವ ಮತ ಹನುಮಪ್ಪನಿಗೆ ನ್ಯಾಯ ಕೊಡುತ್ತದೆ. ಈ ರಾಜ್ಯಕ್ಕೆ, ಮಂಡ್ಯಕ್ಕೆ ನೀರು ಕೊಟ್ಟಿದ್ದು ಟಿಪ್ಪು ಅವರ ಅಪ್ಪ ಅಲ್ಲ, ನಮ್ಮ ನಾಲ್ವಡಿ ಕೃಷ್ಣರಾಜ್ ಒಡೆಯರ್ ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಕೊಟ್ಟಿದ್ದು ಎಂದು ಹೇಳಿದರು.
CT Ravi's speech in Mandya: This time the election is between Tipu Sultan vs Wodeyar
#ctravi #tippusultan #Wodeyar
Our Website: Vijaykarnataka.com
Facebook: / vijaykarnataka
Twitter: / vijaykarnataka
Негізгі бет CT Ravi: ನಮ್ಮ ದೇಹದಲ್ಲಿ ಹರಿಯುತ್ತಿರೋದು ಟಿಪ್ಪು ಅಪ್ಪನ ರಕ್ತ ಅಲ್ಲ.! | Vijay Karnataka
Пікірлер: 28