ದೇಶದ ಪವಿತ್ರವಾದ ಗಂಗಾ ನದಿಯ ಬಗ್ಗೆ ನಿಮಗೆಷ್ಟು ಗೊತ್ತು..?Indian River System |Ganga River|Classic Education
Join Our Telegram Group:
Classic Education
Dharwad
t.me/classiceducationlive
#PSI #RSI #EXAM
ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾ ನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಗಂಗಾನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಗಂಗಾ ನದಿಯ ವೈಶಿಷ್ಟ್ಯ
ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ಗಂಗೋತ್ರಿ. ಹಿಮಾಲಯ ಕೇವಲ ಹಿಮಶಿಖರಗಳ ಆಲಯವಲ್ಲ. ಋಷಿ ಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಹನಿಗಳ ಉಪಯೋಗದಿಂದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿದೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ ಜಿಜ್ಞಾಸೆಗಳು, ಸಾಧಕರು, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳನ್ನು, ಅನಾನುಕೂಲಗಳನ್ನು ಪರಿಗಣಿ ಸದೇ ಅತೀ ಕಠಿಣ ರಸ್ತೆ ಕ್ರಮಿಸಿ ಬರುತ್ತಾರೆ. ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸಿದ್ಧವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ.
ಗಂಗೆಯ ಇತಿವೃತ್ತ
ಉತ್ತರ ಭಾರತದಲ್ಲಿ 'ದೇವಭೂಮಿ' ಎಂದೇ ಪ್ರಸಿದ್ಧವಾದ ಹಿಮಾಲಯದ ನಾಲ್ಕು ಧಾಮಗಳಲ್ಲಿ ಒಂದು ಪಾವನ ಜಲವೆಂದು ಪೂಜಿಸುವ ಗಂಗೆಯ ಉಗಮ ಸ್ಥಳ ಗಂಗೋತ್ರಿ. ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದಿಂದ ಹೊರಡಬೇಕಾಗುತ್ತದೆ. ಹರಿದ್ವಾರ ಅಂದರೆ ಬದರಿನಾರಾಯಣ(ಹರಿ)ಕ್ಕೆ ಇಲ್ಲಿಂದ ಯಾತ್ರೆ ಆರಂಭಿಸು ವುದರಿಂದ ಇದಕ್ಕೆ 'ಹರಿದ್ವಾರ'ವೆಂತಲೂ ಕರೆಯುತ್ತಾರೆ, ಇಲ್ಲಿ ಗಂಗೆ ಎಲ್ಲಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ.
ಹರಿದ್ವಾರದಿಂದ ೨೩ ಕಿ.ಮೀ. ದೂರದಲ್ಲಿ ಋಷಿಕೇಶ ಮಹಾ ಉತ್ತಮ ತೀರ್ಥ ಮತ್ತು ತಪೋಭೂಮಿಯಿದೆ. ಉತ್ತುಂಗ ಪರ್ವತಗಳ ಶಿಖರಗಳ ನಡುವೆ ಹರಿವ ಗಂಗೆಯ ಝಳು ಝಳು ನಿನಾದವೊಂದಿಗೆ ಜಲಧಾರೆ ಹರಿವು, ತಪ್ಪಲ ಪ್ರದೇಶಗಳನ್ನು ಸೇರುತ್ತದೆ.
ಹರಿದ್ವಾರದಿಂದ ಗಂಗೋತ್ರಿಗೆ ೨೨೮.ಕಿ.ಮೀ. ಋಷಿಕೇಶ ದಾಟಿ ಚಂಬಾ ಪಟ್ಟಣದ ತನಕ (೨೯೦ ಅಡ್ಡಿ ಎತ್ತರ) ಉತ್ತಮವಾದ ಅತೀ ಕಡಿದಾದ, ಸಣ್ಣ, ತೀವ್ರ ತಿರುವುಗಳಿಂದ ಕೂಡಿದ ರಸ್ತೆ ಅಲ್ಲಿಂದ (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ) ಉತ್ತರ ಕಾಶಿಯ ಕಡೆಗೆ ಹೊರಡಬೇಕು. ಉತ್ತರಕಾಶಿ ಒಂದು ಅಧುನಿಕ ಬಗೆಯಿಂದ ರಚಿತ ಸುಮಾರು ೫೦೦೦೦ ಜನಸಂಖ್ಯೆಯುಳ್ಳ ನಗರ. ಇಲ್ಲಿ ಈ ಜಿಲ್ಲೆಯ ಪ್ರಮುಖ ಕಾರ್ಯಾಲಯಗಳಿವೆ.
ಉತ್ತರ ಕಾಶಿ
ಉತ್ತರ ಕಾಶಿಯು ನೈಸರ್ಗಿಕ ಸೌಂದರ್ಯ, ಧಾರ್ಮಿಕ ಆಸ್ತಿಕತೆಯ ಅಪೂರ್ವ ಸಂಗಮ ಪ್ರದೇಶ. ಮನುಷ್ಯನ ಮನಸ್ಸಿಗೆ ರೋಮಾಂಚನ ತರುವ ಸ್ಥಳ ಮನಮೋಹಕ ದೃಶ್ಯ. ಭಕ್ತರ ಪಾಲಿಗೆ ಕಲ್ಯಾಣಕಾರಿ. ಪ್ರಕೃತಿಯ ಅನುಪಮ ನೋಟ ತಲೆ ಎತ್ತಿದರೆ ಗಗನಚುಂಬಿ ಬೆಟ್ಟಗಳು, ತಲೆ ತಗ್ಗಿಸಿದರೆ ನೀಳವಾಗಿ ಹರಿಯುವ ಗಂಗೆ, ಇದನ್ನೆಲ್ಲ ಹೋಗಿಯೇ ಅನುಭವಿಸಬೇಕು, ಆಸ್ವಾದಿಸಬೇಕು.
ಉತ್ತರಕಾಶಿಯಲ್ಲಿ ಉಳಿದು ವಿಶ್ರಾಂತಿ ಪಡೆದು ಮುಂದೆ ಹೊರಡಬಹುದು. ಇಲ್ಲಿ ತಂಗಲು ಅನೇಕ ಧರ್ಮಶಾಲೆಗಳು, ವಸತಿಗಳು ಇವೆ. ನೂರು ವರುಷದಷ್ಟು ಹಳೆಯದಾದ ಕೈಲಾಸ ಆಶ್ರಮವೂ ಇದೆ. ಇಲ್ಲಿ ರಾತ್ರಿ ಎಂಟರವರೇಗೆ ಬೆಳಕು ಇರುತ್ತದೆ. ಸೂರ್ಯಾಸ್ತಮ ತಡವಾಗಿ ಆಗುತ್ತದೆ ಇದೇ ಇಲ್ಲಿನ ವೈಶಿಷ್ಟ್ಯ.
ಹಾಗೆ ಬೆಳಿಗ್ಗೆ ೪-೩೦ ಕ್ಕೆಲ್ಲಾ ಇಲ್ಲಿ ಬೆಳಕಾಗುತ್ತದೆ (ಸೂರ್ಯೋದಯವೂ ಬೇಗ). ಇದಕ್ಕೆ ಉತ್ತರ ಕಾಶಿಯೆಂದು ಹೆಸರು ಬಂದಿದ್ದು, ಇಲ್ಲೆ ನೆಲೆಸಿರುವ ಶಿವನಿಂದಾಗಿ. ಉತ್ತರದ ಕಡೆ ಮುಖ ಮಾಡಿರುವ ಶಿವನ ದೇವಾಲಯ ಇಲ್ಲಿದೆ. ಅದಕ್ಕೆ ಎದುರಾಗಿ ಆದಿಶಕ್ತಿಯ ದೇವಸ್ಥಾನವಿದೆ.
ಅಲ್ಲಿನ ವಿಶೇಷ ಸುಮಾರು ೧೦೦ ಅಡಿ ಎತ್ತರದ ಹಿತ್ತಾಳೆಯ ತರ ಇರುವ ಲೋಹದ ತ್ರಿಶೂಲವಿದೆ. ಅದನ್ನು ಅದಿಶಕ್ತಿಯೇ ರಕ್ಕಸರ ಸಂಹಾರದ ನಂತರ ಅಲ್ಲಿ ನೆಟ್ಟಿರುವುದು ಪಾತಾಳಕ್ಕೆ ಹೋಗಿದೆ ಎಂಬುದು ಅಲ್ಲಿನವರ ಹೇಳಿಕೆ. ಅದನ್ನು ತಿಳಿಯಲು ಅನೇಕ ವೈಜ್ಞಾನಿಕ ಪ್ರಯೋಗಗಳಾದರೂ ಸತ್ಯವನ್ನು ತಿಳಿಯಲು ಇನ್ನು ಸಾದ್ಯವಾಗಿಲ್ಲ. ಉತ್ತರ ಕಾಶಿಯಿಂದ ಬೆಳಿಗ್ಗೆ ಬೇಗ ೫ ಗಂಟೆಗೆ ಹೊರಟರೆ ಸಂಜೆಗೆ ವಾಪಾಸ್ಸು ಉತ್ತರ ಕಾಶಿಗೆ ಬಂದು ಸೇರಬಹುದು.
ಉತ್ತರ ಕಾಶಿಯಿಂದ ಗಂಗೋತ್ರಿಗೆ ಹೊರಟಾಗ ದಾರಿಯಲ್ಲಿ ಸಿಗುವ ಸುಂದರ ತಾಣ 'ಹಸ್ಲಿಲ'. ಈ ಪ್ರದೇಶವು 'ಸೇಬು ಮರ'ಗಳಿಂದ ತುಂಬಿ ತುಳುಕುತ್ತದೆ. ಉತ್ತರ ಕಾಶಿ ಯಿಂದ ೧೫.ಕಿ.ಮೀ. ದೂರದಲ್ಲಿ ಮನೇರಿ ಡ್ಯಾಂ ಇದೆ. ಇಲ್ಲಿಯ ನಂತರ ಗಂಗೆ ತನ್ನ ಗಾತ್ರವನ್ನು ಕುಗ್ಗಿಸುತ್ತಾಳೆ. ಬೆಟ್ಟದ ಅಡಿಯಿಂದ ಉತ್ತರಕಾಶಿ ತನಕ ಹೋಗುತ್ತಾಳೆ. ಇಲ್ಲಿಂದ ಮುಂದೆ ಭೂ ಕುಸಿತಗಳ ಪ್ರಕರಣಗಳು ಹೆಚ್ಚು, ಹಾಗೇನಾದರು ಆದರೆ ಗಂಟೆಗಟ್ಟಲೆ-ದಿನಗಟ್ಟಲೆ ಸಾಲುಸಾಲಾಗಿ ವಾಹನಗಳು ನಿಲ್ಲುತ್ತವೆ.
ಮಿಲಿಟ್ರಿಯವರು ಬಂದು ತೆರವು ಮಾಡಿದ ಮೇಲೆ ಹೊರಡಬೇಕಾಗುತ್ತದೆ. ಹಸ್ಲಿಲದಲ್ಲಿ ಮಿಲಿಟ್ರಿ ಕ್ಯಾಂಪ್ ಇದೆ, ಆ ಸ್ಥಳದ ಸುತ್ತ ಮುತ್ತಲೇ 'ರಾಮತೇರಿ ಗಂಗಾಮೈಲಿ' ಹಿಂದಿ ಸಿನಿಮಾ ತೆಗೆದದ್ದನ್ನು ಅಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ನಂತರ ಸಿಗುವುದೇ ಭೈರವ ಘಾಟಿ. ಇಲ್ಲಿ ಭೈರವನ ದೇವಸ್ಥಾನವಿದೆ. ಊಟ-ತಿಂಡಿ ಚಾಯ್ ಹೋಟೆಲುಗಳಿವೆ. ಯಾತ್ರಿಕರು ವಿಶ್ರಾಂತಿ ಪಡೆದು ಮುಂದೆ ಹೊರಡ್ತಾರೆ.
ಭೈರವ ಘಾಟಿಯ ನಂತರ ಗಂಧಕ ಪರ್ವತಗಳ ತಾಣವಿದೆ. ಇಲ್ಲಿ ಬಿಸಿನೀರಿನ ಬುಗ್ಗೆಗಳನ್ನು ನೋಡಬಹುದು. ಯಾತ್ರಿಕರು ಅಲ್ಲಿ ಸ್ನಾನ ಮಾಡಿ ಮುಂದಕ್ಕೆ ಹೊರಡುತ್ತಾರೆ. ಅಲ್ಲಿ ದಾರಿಯುದ್ದಕ್ಕೂ ಪಾದಯಾತ್ರಿಕರನ್ನು ನೋಡುತ್ತೇವೆ (ಸನ್ಯಾಸಿಗಳು-ಸಿಖ್ಖ್ರು ಹೆಚ್ಚು) ಸಿಖ್ಖ್ರು ಡೋಲಿಯ ತರದಲ್ಲಿ ಇರುವ ಗಾಡಿಯಲ್ಲಿ ಗಂಗಾ ಜಲವನ್ನು ಇಟ್ಟು ಭಜನೆ ಮಾಡುತ್ತಾ ಹೋಗುವುದನ್ನು ಕಾಣಬಹುದು.
ಥಂಡಿ ಹವಾ-ತುಂತುರು ಮಳೆ (ಜುಲೈ ತಿಂಗಳು) ಎರಡು ಕಡೆ ಕಡಿದಾದ ಎತ್ತರ ಬೆಟ್ಟಗಳು ಮೇಲಿನಿಂದ ಸಣ್ಣದಾಗಿ ಬೀಳುವ ನೀರಿನಿಂದ ಝರಿಗಳು, ಮೋಡಗಳು, ಪಾತಾಳ ದಲ್ಲಿ ಭೋರ್ಗರೆದು ಹರಿಯುವ ಗಂಗೆ. ಬ್ರಹ್ಮ ಸೃಷ್ಠಿಯನ್ನೇ ಕಡೆದು ಅಲ್ಲಿ ಇಟ್ಟಿದ್ದಾನೆನ್ನುವಂತಿದೆ. ಗಂಗೋತ್ರಿ ಸಮುದ್ರ ಮಟ್ಟದಿಂದ ೩೧೦೦ ಮೀಟರ್(೧೦,೩೫೫ ಅಡಿ) ಎತ್ತರದಲ್ಲಿದೆ. ಗಂಗೋತ್ರಿ ತಲುಪುವ ವೇಳೆಗೆ ಎಲ್ಲ ಆಯಾಸಗಳನ್ನು ಮರೆತುಬಿಡುತ್ತೇವೆ.
Негізгі бет ದೇಶದ ಪವಿತ್ರವಾದ ಗಂಗಾ ನದಿಯ ಬಗ್ಗೆ ನಿಮಗೆಷ್ಟು ಗೊತ್ತು..?Indian River System |Ganga River|Classic Education
Пікірлер: 211