ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆಗಳಿವೆಯೇ? | Naivedyam Offered To God | Avadhootha Sri Vinay Guruji
ಜಗತ್ತನ್ನು ನಿಸ್ವಾರ್ಥವಾಗಿ ಪ್ರೀತಿಸುವವರನ್ನು ಜಗತ್ತು ತಿರುಗಿ ಪ್ರೀತಿಸುತ್ತದೆ ಎನ್ನುವುದು ಜಗದ ನಿಯಮ. ಧರ್ಮ ಮತ್ತು ಅಧರ್ಮದ ಪ್ರತಿಯೊಂದು ಕರ್ಮಕ್ಕೂ ಪ್ರತಿಕ್ರಿಯೆ ಇದ್ದೇ ಇದೆ. ವಿಗ್ರಹಕ್ಕೆ ಮಾಡುವ ಪ್ರಾಣ ಪ್ರತಿಷ್ಠೆಯು ಮಗುವೊಂದಕ್ಕೆ ಜನ್ಮ ನೀಡುವ ಸಮಾನವಾಗಿದೆ. ಅರ್ಚಕ ಧರ್ಮಕ್ಕೆ ವಿರುದ್ಧವಾಗಿ ನಡೆದರೆ ಗರ್ಭಗುಡಿಯ ಪಾವಿತ್ರ್ಯ ಹರಣವಾಗುತ್ತದೆ. ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆ ಇಡುವಲ್ಲಿ ತಪ್ಪೇನಿಲ್ಲ. ಭಕ್ತಿ ಮಾರ್ಗದಿಂದ ಮಾಡಿದ ಭಗವಂತನ ಪ್ರತಿಷ್ಠೆ ಬಸವಣ್ಣನ ಮಾರ್ಗವಾಗಿದೆ. ಇಲ್ಲಿ ನಿಯಮ ನಿಬಂಧನೆಗಳ ಅಡ್ಡಿ ಇಲ್ಲ. ಈ ಬಗೆಯ ಪ್ರತಿಷ್ಠೆಯಲ್ಲಿ ಭಾವಶುದ್ಧಿ ಮುಖ್ಯ ಸಂಗತಿ. ಶಾಸ್ತ್ರೋಕ್ತ ಪ್ರತಿಷ್ಠೆಯಲ್ಲಿ ಶಾಸ್ತ್ರವೇ ಮುಖ್ಯವಾಗಿದೆ. ಮಂತ್ರೋಕ್ತ ಪ್ರತಿಷ್ಠೆಯಲ್ಲಿ ಮಂತ್ರವೇ ಪ್ರಾಧಾನ್ಯವಾಗಿದೆ. ಶಬರಿಮಲೆ ಯಾತ್ರೆಯಲ್ಲಿ ಸಾಮೂಹಿಕತೆಯೇ ಪ್ರಾಧಾನ್ಯವೆನಿಸಿಕೊಳ್ಳುತ್ತದೆ. ಆಯಾಯ ಗುಣಗಳಿಗೆ ಅನುಗುಣವಾಗಿ ಜನರು ಗುರುವನ್ನು ಇಷ್ಟಪಡುತ್ತಾರೆ. ಇದ್ದದ್ದನ್ನು ಇದ್ದ ಹಾಗೇ ಒಪ್ಪಿಕೊಳ್ಳುವುದರಿಂದ ಆಧ್ಯಾತ್ಮದ ಅಧ್ಯಯನ ಆರಂಭವಾಗುತ್ತದೆ. ಅನುಭವದ ಜೊತೆ ಅಧ್ಯಯನವಾದಾಗ ಮೂಢನಂಬಿಕೆ ಅಳಿಯುತ್ತದೆ. ಸ್ವ ಅನುಭವವಿಲ್ಲದೆ ಸ್ವ ಆನಂದ ಮತ್ತು ಸ್ವರೂಪ ದರ್ಶನವಾಗುವುದಲ್ಲ ಎಂದು ಆಚಾರ್ಯ ಶಂಕರರು ಉಲ್ಲೇಖಿಸಿದ್ದಾರೆ. ಅಧ್ಯಯನದ ಬಗೆಗಿನ ಉದಾಸೀನತೆ ಮತ್ತು ಅನುಭವದ ಬಗೆಗಿನ ಭಯ ಶಮನವಾದಾಗ ಸತ್ಯ ದರ್ಶನವಾಗುತ್ತದೆ. ಪುಣ್ಯವನ್ನು ಧಾರೆ ಎರೆಯುವ ಪ್ರಕ್ರಿಯೆಯೇ ತರ್ಪಣ. ಎಲ್ಲಾ ವೃತಗಳಲ್ಲೂ ದೊಡ್ಡ ವೃತವೆಂದರೆ ಸತ್ಯವೃತ ಎಂಬ ಉಲ್ಲೇಖವಿದೆ ಇದುವೇ ಸತ್ಯನಾರಾಯಣ ವೃತ ಎನಿಸಿಕೊಂಡಿದೆ.
For More Videos:
ಕಾಂತಾರ ಸಿನಿಮಾ ಚಿತ್ರೀಕರಣದ ವೇಳೆ ರಿಷಭ್ ಶೆಟ್ಟಿಗೆ ಅವಧೂತರು ಹೇಳಿದ್ದೇನು? | ಅವಧೂತ ಶ್ರೀ ವಿನಯ್ ಗುರೂಜಿ • ಕಾಂತಾರ ಸಿನಿಮಾ ಚಿತ್ರೀಕರ...
ಇದು ಓಂಕಾರದ ಹಿಂದಿನ ಮಹಾರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ಓಂಕಾರದ ಹಿಂದಿನ ಮಹಾರ...
ನಮ್ಮಲ್ಲಿನ ಅಹಂಕಾರವನ್ನು ಕಳೆಯುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ • ನಮ್ಮಲ್ಲಿನ ಅಹಂಕಾರವನ್ನು ...
ಅವಧೂತರ ಅಮೃತ ಹಸ್ತದಿಂದ ಶ್ರೀ ನಿತ್ಯಾನಂದ ಭಗವಾನರ ಆರಾಧನೆ | ಅವಧೂತ ಶ್ರೀ ವಿನಯ್ ಗುರೂಜಿ • ಅವಧೂತರ ಅಮೃತ ಹಸ್ತದಿಂದ ಶ...
ಅವಧೂತ ಆಶ್ರಮದಲ್ಲಿ ಶ್ರೀ ಆಂಜನೇಯ ಮತ್ತು ಗರುಡ ದೇವರ ಗುಡಿಗೋಪುರದ ನೂತನ ಕಲಶ ಸ್ಥಾಪನೆ ಮತ್ತು ಕುಂಭಾಭಿಷೇಕ • ಅವಧೂತ ಆಶ್ರಮದಲ್ಲಿ ಶ್ರೀ ...
Негізгі бет ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆಗಳಿವೆಯೇ?| Naivedyam Offered To God | Avadhootha
Пікірлер: 8