ಮದುವೆಯಾದ ಹೆಂಡತಿಯನ್ನು ಕೇರ್ ಟೇಕರ್ ಗೆ ಹೋಲಿಸಿ ತನ್ನ ಜೀವನಕ್ಕೆ ಬೇಡದೆ ಬಂದ ಅತಿಥಿಯಾದೆ ಎಂದು ಚುಚ್ಚಿ ಮಾತನಾಡಿದವರು ನೀವೇ ಅಲ್ವಾ....? ನಿಮಗೆ ಆಕ್ಸಿಡೆಂಟ್ ಆಗಿ ಹುಷಾರಿಲ್ಲದೆ ಹಾಸಿಗೆ ಹಿಡಿದಿದ್ದಾಗ ನಿಮ್ಮ ಸೇವೆಯನ್ನು ಮಾಡಲು ಅವಳು ಬೇಕಿತ್ತು..... ಆದ್ರೆ ಅವಳಿಂದಲೇ ನೀವು ಇಂದು ಆದಷ್ಟು ಬೇಗ ರಿಕವರಿ ಆಗಿ ನಡೆದಾಡುವ ಹಾಗೆ ಆಗಿದ್ದಾಗ ಅವಳನ್ನು ಮನೆ ಬಿಟ್ಟು ಹೋಗು ಎಂದು ಹೇಳುವುದು ಅಲ್ಲದೆ..... ಕೇರ್ ಟೇಕರ್ ಆಗಿಯೇ ಕೆಲಸ ಕಂಟಿನ್ಯೂ ಮಾಡು ಹೇಗಿದ್ದರೂ ವಾಸಕ್ಕೆ ಮನೆಯು ಸಿಗುತ್ತದೆ, ಊಟಕ್ಕೂ ತೊಂದರೆ ಇರುವುದಿಲ್ಲ, ಹೇಗಿದ್ದರೂ ಆ ಕೆಲಸವೇ ನಿನಗೆ ಪರ್ಫೆಕ್ಟ್ ಎಂದು ಹೇಳಿದ ಮಹಾನುಭಾವ ನೀವೇ ಅಲ್ವಾ..... ಎಂದು ಕೇಳಿದವಳ ಮಾತಿನಲ್ಲಿ ವ್ಯಂಗ್ಯವಿತ್ತು.
ಈ ಮಾತುಗಳನ್ನು ಧೃತಿಯೇ ಹೇಳಿದ್ದರೆ ದುಷ್ಯಂತ್ ಗೆ ಅಷ್ಟು ನೋವಾಗುತ್ತಿರಲಿಲ್ಲ, ಯಾಕಂದ್ರೆ ಅವನಿಂದ ನೋವು ಅನುಭವಿಸಿರುವವಳು ಅವನ ಎದುರಿಗೆ ತನ್ನ ನೋವನ್ನು ಹೊರ ಹಾಕಿದ್ದರೆ ಅಷ್ಟು ನೋವಾಗುತ್ತಿರಲಿಲ್ಲ ದುಷ್ಯಂತ್ ಗೆ, ಆದರೆ ಬೇರೆಯವರಿಂದ ಈ ವಿಷಯ ತಿಳಿದಿದ್ದರಿಂದ ಅವನು ಆಡಿದ ಮಾತಿನ ತೀವ್ರತೆ ಎಷ್ಟಿತ್ತು, ಅವನ ಮಾತು ಎಷ್ಟು ಹರಿತವಾಗಿತ್ತು ಎಂದು ಅವನಿಗೆ ಈಗ ತಿಳಿಯುತ್ತಿತ್ತು.
#lifelessonstories #moralstories #storiesinkannada #kannadaaudiostory #beststorykannada #ಕನ್ನಡಕಥೆಗಳು #trendingvideo #kannadamotivationalstories #ಕನ್ನಡಕಾದಂಬರಿ
Негізгі бет ಧೃತಿಯನ್ನು ಹುಡುಕಿಕೊಂಡು ಅವಳಿದ್ದ ಮನೆಗೆ ಬಂದ ಗುಣಶೀಲ. - 96
Пікірлер: 15