ದಿನಾಂಕ : 5/ 6/2024 ರಂದು ಮೈಸೂರಿನ ವಿಜಯನಗರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರವು ಪರಿಸರ
ದಿನಾಚರಣೆಯನ್ನು ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸಿತು. ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಮೈಸೂರಿನ ಪ್ರಸಿದ್ಧ ಸಾವಯವ ಕೃಷಿಕರಾದ ಶ್ರೀ ಎ.ಪಿ.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರು 'ಪರಿಸರ'ವೆಂಬ ಶಬ್ದದೊಳಗಿನ ಗೂಢಾರ್ಥವನ್ನು ಪರಿಪರಿಯಾಗಿ ಸರಳ-ಸುಂದರವಾಗಿ ಮಕ್ಕಳಿಗೆ
ವಿವರಿಸಿದರು. ಈ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆಯ ಬಗ್ಗೆ ಜಾಗೃತಿ ಮೂಡಿಸಿದರು. ಸನ್ಮಾನಿತರಿಗೆ ಗೋವಿನ
ಸಗಣಿಯಿಂದ ಶಾಲೆಯಲ್ಲಿಯೇ ತಯಾರಿಸಿದ್ದ ತುಳಸಿ ಕುಂಡವನ್ನು ಗೌರವಪೂರ್ವಕವಾಗಿ ನೀಡಿದ್ದು ಬಹು ಮೆಚ್ಚುಗೆಯಾಯಿತು.
ಸಭಾ ಕಾರ್ಯಕ್ರಮದ ಆನಂತರ ಶಿಕ್ಷಕರಾದ ಶ್ರೀ ಪಿ ಮಹೇಂದ್ರ ಪ್ರಸಾದ್ ಗುರೂಜಿಯವರ ಸಾರಥ್ಯದಲ್ಲಿ ಶಾಲೆಯ ಸಮೀಪದಲ್ಲಿರುವ
ಮುತ್ತುರಾಯನ ಗುಡ್ಡದ ಸುತ್ತಮುತ್ತಲ ಪ್ರದೇಶದಲ್ಲಿ ಶಾಲೆಯ 6 ಮತ್ತು 7ನೆಯ ತರಗತಿಯ ಮಕ್ಕಳು ಬೀಜದುಂಡೆಗಳನ್ನು
ಹರಡುವ ಮೂಲಕ ಪರಿಸರ ಸಂರಕ್ಷಣೆಯ ಪಣತೊಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನಾಚಾರ್ಯರಾದ ಶ್ರೀ
ಶಿವರಾಜ್ ಎನ್, ಆಡಳಿತಾಧಿಕಾರಿಗಳಾದ ಶ್ರೀ ಚಂದ್ರಶೇಖರರವರು, ಶೈಕ್ಷಣಿಕ ಸಂಯೋಜಕರಾದ ಶ್ರೀಮತಿ ದಿವ್ಯ ಗಣೇಶ್
ರವರು ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರರು ಉಪಸ್ಥಿತರಿದ್ದರು. ಕಾರ್ಯಕ್ರಮವು 'ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬ
ಗಾದೆಯಂತೆ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೀಜಾಂಕುರವಾಯಿತು.
Негізгі бет Environment Day 2024
Пікірлер