ಪತಿಯ ಆಯುಷ್ಯಾಭಿವೃದ್ಧಿ ಬಯಸುವವಳು ಹೊಸ್ತಿಲ ಮೇಲೆ ಕೂಡಬಾರದು. ಹೊಸ್ತಿಲ ಮೇಲೆ ಕೂತು ಸೀನ ಬಾರದು ತವರಿಗೆ ಬರುವದು ಬಡತನ .... ಸುಖ ನೆಮ್ಮದಿ ಬೇಕಾದರೆ ಹೊಸ್ತಿಲು ತೊಳೆದು ರಂಗವಲ್ಲಿ ಹಾಕಿಪೂಜೆ ಮಾಡದೇ ಇರಬೇಡ ಹೊಸ್ತಿಲಲಿ ಇರುವನು ವಾಸ್ತು ಪುರುಷ ... ಇಪ್ಪತ್ತನಾಲ್ಕು ಎಳೆಗಳ ಹಾಕಿ ಮದ್ಯದಲಿ ಶಂಖ ಚಕ್ರವ ಬಿಡಿಸು ಸಿರಿಯೊಂದಿಗೆ ರಮಣನು ಸಂತಸದಲಿ ಬಯಸಿದ್ದು ಕೊಡುವ ..ಮದ್ಯದಲಿ ನಾಲ್ಕು ಸ್ವಸ್ತಿಕನೇ ಹಾಕು ದಾಟಿ ಹೋದವರು ಸ್ವಸ್ಥವಾಗಿ ಮರಳುವರು ಮನೆಗೆ . ಮನೆಯೂ ಸ್ವಸ್ಥವಾಗಿರುವದು... ಎಡಬಲದಲಿ ಜಯ , ವಿಜಯರನ್ನು ಬರೆಯದೆ ಇರಬೇಡಿ ಸಿರಿರಮಣ ಇರುವ ಬಾಗಿಲು ಕಾಯ್ವರು ಅವರು... ಹೋಸ್ತಿಲ ಮುಂದೆ ನೀ ಬಿಡಿಸು ಒಳಬರುವ ಕಾಮದೇನುವಿನ ಪಾದ ದಾರಿದ್ರ್ಯ ಒಳ ಬರಲಾಗದೇ ಓಡಿ ಹೋಗುವದು. ಸಂಜೆ ಸಮಯದಲಿ ಹೋಸ್ತಿಲ ದಾಟಿ ಹೊರಹೋಗದಿರು , ಬಾಗಿಲುಹಾಕಿ ಒಳ ಕೂರದಿರು ಲಕ್ಷೀ ಬರುವ ಸಮಯವದು , ಮುನಿಸಿಕೊಂಡಾಳು...✍️✍️ ವೀಣಾ ಜೋಶಿ
- Күн бұрын
ಹೊಸ್ತಿಲು ರಂಗೋಲಿ ವಿಧಾನ ಮತ್ತು ಪೂಜೆಯ ವಿಧಾನ .....ವೀಣಾ ಜೋಶಿ
- Рет қаралды 151,984
Пікірлер: 343