ಮನಸ್ಸಿನ ಒತ್ತಡದಿಂದ ಹೊರ ಬರುವುದು ಹೇಗೆ..? । ಅವಧೂತ ಶ್ರೀ ವಿನಯ್ ಗುರೂಜಿ
ಚಿಂತೆ ಚಿಂತನೆಯಾದಾಗ ಲೌಖಿಕ ಪಾರಮಾರ್ಥಿಕ ವಾಗುತ್ತದೆ - ಶ್ರೀ ವಿನಯ್ ಗುರೂಜಿ
ದುಡ್ಡಿಲ್ಲ ಎಂದರೆ ದುಡಿದು ದುಡ್ಡು ಸಂಪಾದಿಸಬಹುದು. ಉಷಾರಿಲ್ಲ ಎಂದರೆ ಮಾತ್ರೆ ತಿಂದು ಸರಿಮಾಡಿಕೊಳ್ಳಬಹುದು. ಆದರೆ ಮನಸ್ಸಿಗೆ ಕಾಯಿಲೆ ಬಂದರೆ ಸರಿಮಾಡಲು ಹೇಗೆ ಸಾಧ್ಯ, ಅದನ್ನು ನೀವೆ ಅರಿತುಕೊಳ್ಳಬೇಕು. ಅದಕ್ಕೆ ಈ ಪ್ರೋಟೀನ್ ವಿಟಮಿನ್ ಇಟ್ಟುಕೊಂಡು ಏನು ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಅದಕ್ಕೆ ಸರಿಯಾಗಿ ವಿವರಣೆ ಕೊಟ್ಟು ಅವನ ಮನಸ್ಸಿನ ಗೊಂದಲ ಬಿಡಿಸಿದಾಗ ಮತ್ತು ಅದಕ್ಕೆ ಪರಿಹಾರವನ್ನು ಕೊಟ್ಟಾಗ ಮಾತ್ರ ಅವನು ಸರಿಯಾಗಲು ಸಾಧ್ಯವಾಗುತ್ತೆ. ಇದನ್ನು ಹಿಂದೆ ತಾತ್ವಿಕ ಚಿಂತನೆ ಅಂತ ಕರೆತಾ ಇದ್ದರು ಇವಾಗ ಅದನ್ನು ಸೈಕಾಲಜಿ ಅಂತ ಕರೆಯಲಾಗುತ್ತದೆ.
ಎರಡು ಒಂದೇ ಅಂದರೆ ತತ್ವ ದರ್ಶನ ಮನಸ್ಸನ್ನು ನಿಯಂತ್ರಿಸೋಕೆ ಯಾವ ಪುಸ್ತಕಕ್ಕೂ ಸಾಧ್ಯವಾಗುವುದಿಲ್ಲ ಯಾಕೆಂದರೆ ಅದು ಮಾನುಷ್ಯನ ಮನಸ್ಸಿನ ಹಿಡಿತದ ಮೇಲೆ ನಿಂತಿರುತ್ತದೆ, ಹಾಗಾಗಿ ಅವನು ತನ್ನನ್ನು ಸರಿಯಾಗಿ ನಿಯಂತ್ರಿಸಲು ಕಲಿಯದಿದ್ದರೆ ಮನಸ್ಸು ಗೊಂದಲಕ್ಕೆ ಒಳಗಾಗುತ್ತದೆ. ಉದಾಹಾರಣೆ ಎಂದರೆ ನಾನು ಈಗ ನೀರು ಕುಡಿದೆ ಅದು ನನಗೆ ಬಾಯಾರಿಕೆಯನ್ನು ಕಡಿಮೆ ಮಾಡಿತು ಹಾಗಂತ ನಾನು ಅದನ್ನು ಪೂರ್ತಿಯಾಗಿ ಅರಿತುಕೊಂಡಿದ್ದೀನಿ ಅಂತ ಅಲ್ಲ ಅದು ಮೂರ್ಖತನಕ್ಕೆ ಸಾಕ್ಷಿಯಾಗುತ್ತದೆ. ಯಾವಾಗ ಮಾನವನು ತನ್ನ ಬುದ್ದಿಯ ಮೇಲೆ ನಿಯಂತ್ರಣವನ್ನು ಕಡಿಮೆ ಮಾಡಿಕೊಳ್ಳುತ್ತಾನೋ ಅಂದು ಅವನ ಎಲ್ಲಾ ಒತ್ತಡಗಳನ್ನು ಬೇರೆಯವರ ಮೇಲೆ ತೋರಿಸಲು ಶುರುಮಾಡುತ್ತಾನೆ.
ಇದೇ ಈಗಿನ ಸಮಾಜದ ಪರಿಸ್ಥಿತಿ ಹೆಚ್ಚು ಹೀಗೆ ನೆಡೆಯುತ್ತಿರೋದು. ಇದು ಕಡಿಮೆ ಯಾಗಬೇಕು. ಅಂದರೆ ಮಾನವನು ಎಲ್ಲವನ್ನು ತನ್ನಲ್ಲಿ ನಿಯಂತ್ರಿಸುವುದನ್ನು ಕಲಿತುಕೊಳ್ಳಬೇಕು. ಯಾವುದೋ ಒಂದು ಅಶಾಂತಿ ಯಾವುದೋ ರೂಪ ಧರಿಸಿ ನಮ್ಮ ಮನೆಗೆ ಬಂದಾಗ ಮನುಷ್ಯನು ಕಿರಿಕಿರಿಯಿಂದ ಗೊಂದಲಕ್ಕೆ ಒಳಗಾಗುತ್ತಾನೆ. ಅಷ್ಟೇ ಮಗನ ಮೇಲೆ ಕೋಪ ಬಂದರೆ ಹೆಂಡತಿಯಮೇಲೆ ತೋರಿಸುತ್ತೇವೆ. ಅವನು ತನ್ನ ಯೋಚನೆಗಳು ಮತ್ತು ಮಾತಿನ ಮೇಲೆ ನಿಯಂತ್ರಣವನ್ನು ಕಳೆದುಕೊಂಡಾಗ ಪ್ರತಿ ಕ್ಷಣ ಭಯದ ಜೀವನವನ್ನು ನಡೆಸಲು ಶುರು ಮಾಡಿಬಿಡುತ್ತಾನೆ.
ಯಾವಾಗ ಮನುಷ್ಯನು ಯಾವ ಚಿಂತೆಯೂ ಇಲ್ಲದೆ ಇರುತ್ತಾನೋ ಅಂದು ಅವನು ಯಾವ ತೊಂದರೆಗೂ ಒಳಗಾಗುವುದಿಲ್ಲ ಆರಾಮಾಗಿ ಇರುತ್ತಾನೆ . ಅವನಿಗೆ ಯಾವ ಕಾಯಿಲೆಗಳು ಬರಲು ಸಾಧ್ಯವಾಗುವುದಿಲ್ಲ. ಅಂದರೆ ಟ್ರೆಸ್ ಲೆಸ್ ಮೈಂಡ್. ಇದಕ್ಕೆ ಮೂಲ ಕಾರಣವೇ ಮೋಹ ಯಾವಾಗ ಮುನುಷ್ಯನು ಮೋಹಕ್ಕೆ ಒಳಗಾಗುತ್ತಾನೆ ಅಂದು ಅವನು ತನ್ನ ನೆಮ್ಮದಿಯ ಜೀವನವನ್ನು ಕಳೆದುಕೊಳ್ಳುತ್ತಾನೆ. ಇಷ್ಟ ಪಟ್ಟಿದನ್ನು ಪಡೆದುಕೊಳ್ಳುವುದಕ್ಕೆ ಮತ್ತು ಅದು ಬೇಕೆ ಬೇಕು ಎಂಬ ಹಠಕ್ಕೆ ಬಿದ್ದು ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಚಿಂತೆ ಚಿಂತನೆಯಾದಾಗ ಲೌಖಿಕ ಪಾರಮಾರ್ತಿಕವಾಗುತ್ತದೆ. ಹಾಗಾಗಿ ಮನಸ್ಸಿನ ಜೊತೆ ನಿಜವಾದ ಸಂಬಂಧದ ಅರಿವನ್ನು ಹೊಂದಬೇಕಾಗುತ್ತದೆ.
ಪ್ರತಿಯೊಂದನ್ನು ತಪಸ್ಸು ಅಂತ ನೋಡು ಜೀವನದಲ್ಲಿ ಸಾಧನೆಯ ಹಾದಿಯನ್ನು ಬಹುಬೇಕ ಮುಟ್ಟುತ್ತೀಯಾ. ನಮ್ಮನ್ನೆಲ್ಲ ಸೃಷ್ಟಿಮಾಡಿದ್ದು ಒಬ್ಬನೇ ನಾವು ಮಾಡುವ ಪ್ರತಿ ಕೆಲಸದಲ್ಲು ಅವನು ಇದ್ದೇ ಇರುತ್ತಾನೆ ಹಾಗಾಗಿ ಅವನನ್ನು ನಾವು ನಮ್ಮ ಅಂತರಂಗದಲ್ಲಿ ಕಂಡುಕೊಳ್ಳಲೇಬೇಕಾಗುತ್ತದೆ. ಮಾನವ ಹಣಕ್ಕಾಗಿ ಪ್ರತಿ ನಿತ್ಯಹೊಡೆದಾಡುತ್ತಾನೆಯೇ ಹೊರತು ನೆಮ್ಮದಿ, ಪ್ರೀತಿ, ಸ್ನೇಹ, ಸಂಬಂಧಕ್ಕಾಗಿ ಅಲ್ಲ. ಹಣ ಮಾನವನ ಅಸ್ಥಿತ್ವವನ್ನು ಸಂಪೂರ್ಣವಾಗಿ ಬದಲಾಯಿಸುವಂತಹ ಒಂದು ತುಂಬಾ ಶಕ್ತಿಯುಳ್ಳ ಸಾಧನವಾಗಿದೆ ಹಾಗಾಗಿ ಅದನ್ನ ಹುಡುಕುತ್ತಾ ಯಾವಾಗ ಮಾನವನು ಹೋಗುತ್ತಾನೋ ಅಂದು ಅವನು ನೆಮ್ಮದಿಯನ್ನು ಹುಡುಕಲು ಶುರುಮಾಡುತ್ತಾನೆ.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ...
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾ...
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವ...
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ...
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು...
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ...
#Avadhoothavinayguruji #BhagavadGita #SriVinayguruji #spirituality #LordShiva #philosophy #KannadaPravachana #Swamiji #vinaygurujifollowers #live #trendingnews #India #Ashram #kannadaculture #kanadigas #2021
Негізгі бет ಇದೇ ಮನಸ್ಸಿನ ಒತ್ತಡಕ್ಕೆ ಮೂಲ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿ
Пікірлер: 76