ಒಂದೇ ವೃಂದಾವನಕ್ಕೆ ಜಯತೀರ್ಥರದು, ರಘುವರ್ಯರದು ಎಂಬ ವಿವಾದ ಮಧ್ಯೆ ಶನಿವಾರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಗಳ ಮಠದಿಂದ ಜಯತೀರ್ಥರ ಆರಾಧನೆಯು ನಡೆಯಿತು. ಎರಡು ದಿನ ಉತ್ತರಾದಿ ಮಠದವರಿಂದ ರಘವರ್ಯರ ಆರಾದನೆ ನಡೆಯಿತು. ಇದು ಯಾವ ಯತಿಗಳದ್ದು ಎಂಬುವುದು ಇನ್ನೂ ಇತ್ಯಾರ್ಥವಾಗಿಲ್ಲ. ಆದರೆ ಉತ್ತರಾದಿ ಹಾಗು ರಾಯರಮಠ ಇಬ್ಬರಿಗೂ ಪೂಜೆಗೆ ಅವಕಾಶವನ್ನು ಧಾರವಾಡ ಹೈಕೋರ್ಟ್ ಸೂಚನೆ ನೀಡಿತ್ತು.
ಕೊಪ್ಪಳ ಜಿಲ್ಲೆಯ ಆನೆಗೊಂದಿ ಬಳಿಯ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ನವವೃಂದಾವನ ಗಡ್ಡೆ 9 ಯತಿಗಳು ವೃಂದಾವನಸ್ಥರಾದ ಸ್ಥಳ. ಇಲ್ಲಿಯ ಒಂದು ವೃಂದಾವನ ಇದು ರಘುವರ್ಯರ ವೃಂದಾವನವೆಂದು ಉತ್ತರಾದಿ ಮಠದವರು. ಇಲ್ಲ ಇದೇ ಜಯತೀರ್ಥರ ವೃಂದಾವನ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಮಠದವರ ವಾದವಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತವು ಇಲ್ಲಿ ಆರಾದನೆಗೆ ನಿರ್ಬಂಧ ಹೇರಿದ್ದರು. ಇದನ್ನು ಪ್ರಶ್ನಿಸಿ ಎರಡು ಮಠದವರು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಮಧ್ಯಂತರ ಆದೇಶ ನೀಡಿದ ಧಾರವಾಡ ಹೈಕೋರ್ಟ್ ನ್ಯಾಯಾಧೀಶರು ಮೊದಲು ಮೂರು ದಿನ ಉತ್ತರಾದಿ ಮಠದವರು ರಘುವರ್ಯರ ಆರಾಧನೆ. ನಂತರದ ಮೂರು ದಿನ ಮಂತ್ರಾಲಯದ ರಾಯರ ಮಠದವರು ಆರಾದನೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಈಗಾಗಲೇ ಉತ್ತರಾದಿಮಠದವರು ಜುಲೈ 4 ರಿಂದ 7 ರವರೆಗೆ ರಘುವರ್ಯಯ ಮಹಿಮೋತ್ಸವ ಆಚರಿಸಿದರು. ಈಗ ಮಂತ್ರಾಲಯದ ಮಠದವರಿಂದ ತ್ರಿರಾತ್ರೋತ್ಸವ ಆಚರಣೆ ನಡೆಯುತ್ತಿದೆ.
ಧಾರವಾಡ ಹೈಕೋರ್ಟ್ ಸೂಚನೆಯ ಹಿನ್ನಲೆ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಈಗಿನ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರ ನೇತೃತ್ವದಲ್ಲಿ ಆರಾಧನೆ ನಡೆಯುತ್ತಿದೆ. ಉತ್ತರಾದನೆಯ ಹಿನ್ನಲೆಯಲ್ಲಿ ಜಯತೀರ್ಥರ ವೃಂದಾವನಕ್ಕೆ ಅಲಂಕಾರ, ವಿಶೇಷ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಕಷ್ಟು ಭಕ್ತರು ಭಾಗಿಯಾಗಿದ್ದರು. ಎರಡು ದಿನ ಉತ್ತರಾದಿಮಠದಿಂದ ಇದೇ ವೃಂದಾವನಕ್ಕೆ ಶ್ರೀರಘುವರ್ಯರ ಆರಾಧನೆ ಮಾಡಿದ್ದರು. ಆಗ ರಾಯರ ಮಠದ ಭಕ್ತರು ಆನೆಗೊಂದಿಯಲ್ಲಿಯ ರಾಘವೇಂದ್ರ ಮಠದಲ್ಲಿ ಎರಡು ದಿನ ಆರಾಧನೆ ಮಾಡಿದ್ದರು.
koppal anegundi nava brindavanam jayatheertha aradhana pooja from rayara mutt dharwad high court case
#koppal #raghavendra #highcourt
Our Website : Vijaykarnataka.com
Facebook: / vijaykarnataka
Twitter: / vijaykarnataka
Our Video Website: kannada.timesxp.com/
Негізгі бет Jayatheertha Aradhana Pooja: ನ್ಯಾಯಲಯದ ಆದೇಶ, ರಾಯರ ಮಠದಿಂದ ಜಯತೀರ್ಥರ ಆರಾಧನೆ | Vijay Karnataka
Пікірлер: 10