ಅನುಮತಿ ಇಲ್ಲದ ಹೊರತಾಗಿಯೂ ಶೋಭಯಾತ್ರೆಗೆ ಮುಂದಾಗಿದ್ದ ಹಿಂದೂಪರ ಸಂಘಟನೆಗಳ ವಿರುದ್ಧ ಕೋಲಾರ ಎಸ್ಪಿ ದೇವರಾಜ್ ಗರಂ ಆದ ಘಟನೆ ನಡೆದಿದೆ. ರಾಮನವಮಿ ಪ್ರಯುಕ್ತ ಭಾನುವಾರ ಕೋಲಾರ ನಗರದಲ್ಲಿ ಹಿಂದೂಪರ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದವು. ಈ ಕಾರ್ಯಕ್ರಮಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರೂ ಕೂಡ ಬಂದಿದ್ದರು. ಕಾರ್ಯಕ್ರಮದ ಬಳಿಕ ಶೋಭಾ ಯಾತ್ರೆ ನಡೆಸಲು ಮುಂದಾದ ಕಾರ್ಯಕರ್ತರ ವಿರುದ್ಧ ಎಸ್ಪಿ ದೇವರಾಜ್ ಗರಂ ಆದರು.
ಕಳೆದ ಎರಡು ದಿನಗಳ ಹಿಂದೆ ಮುಳಬಾಗಿಲು ಪಟ್ಟಣದಲ್ಲಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆ ಭಾನುವಾರದ ಶೋಭಾಯಾತ್ರೆಗೆ ಅನುಮತಿ ನೀಡಿರಲಿಲ್ಲ. ಕೋಲಾರ ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ ಎಂದು ಕಾರ್ಯಕ್ರಮದ ಆಯೋಜಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು.
#Kolar #Shobhayatra #KolarSP
Our Website : Vijaykarnataka...
Facebook: / vijaykarnataka
Twitter: / vijaykarnataka
Негізгі бет Kolar SP Outrage Against Hindu Organisation : ಪೊಲೀಸ್ ಕೆಲ್ಸ ಗೊತ್ತಿದೆ ನಮ್ಗೂನು.. | Vijay Karnataka
Пікірлер: 1 М.