ಮಾದಪ್ಪನ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ,
* ಬೇಡಗಂಪಣ ಬುಡಕಟ್ಟು ಸಂಪ್ರದಾಯದಂತೆ ಸುಗ್ಗಿ ಮಕರ ಸಂಕ್ರಾಂತಿ ಹಬ್ಬದ ಆಚಾರಣೆ 3 ದಿನ ಕಾಲ ಜರುಗಿತು.
* ಬೇಡಗಂಪಣ ಕುಲಗುರುಗಳಾದ ಶ್ರೀ ಸಾಲೂರು ಬೃಹನ್ಮಠ ಪಟ್ಟದ ವಿದ್ವಾನ್ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರ ಸಾನಿತ್ಯದಲ್ಲಿ.
* ಉತ್ತರಾಣಿ ಗಿಡ,ಗಂಡು ಅಣ್ಣೆಸೋಪು,ಬೇವಿನ ಸೋಪುನ ಗುಚ್ಚದಿಂದ ಕಾಪು ಕಟ್ಟುವ ಮೂಲಕ ಸಂಕ್ರಾಂತಿ ಆರಂಭ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪವಿತ್ರ ಪವಾಡ ಪುಣ್ಯಕ್ಷೇತ್ರ ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ಧನೂರ್ಮಾಸದ ವಿಶೇಷ ಪೂಜಾ ಬೇಡಗಂಪಣ ಬುಡಕಟ್ಟು ಪರಂಪರೆಯತೆ ಸುಮಾರು 40 ದಿನಗಳಲ್ಲಿದಲ್ಲೂ ವಿಶೇಷವಾಗಿ ಸೂರ್ಯೋದಯಕ್ಕೂ ಮುನ್ನ ಮಹದೇಶ್ವರ ಸ್ವಾಮಿಯವರಿಗೆ ವಿಶೇಷ ಕಾಡಿನ ಕಾದ್ಯ ನೈವೇದ್ಯ, ಭಜನೆಯ ಮೂಲಕ ವಿಶೇಷ ವಾಹನೋತ್ಸವ ಸೇವೆಗಳು ನಿರಂತರವಾಗಿ ನಡೆಯುವುದಲ್ಲದೆ ಈ ಸಮಯದಲ್ಲಿ ಎಪ್ಪತ್ತೇಳು ಮಲೆ ತಪ್ಪೋ ನಲೆಗಳಲ್ಲಿಯು ಸಹ ಬೇಡಗಂಪಣರಿಂದ ತವಸರೆ,ಕಂಬದಬೂಳಿ,ಇಂಡಿ ಬಸವೇಶ್ವರ, ಕಾರಯ್ಯ ಮತ್ತು ಬಿಲ್ಲಯ್ಯ,ಪಾದದರೆ,ಅನುಮಲೆ,ಜೇನುಮಲೈ,ಬಳೆ ಕಲ್ಲುಬಸವೇಶ್ವರ,ಕೊಡಗಲ್ಲು ಮಾದಪ್ಪ,ಜಡೇರುದ್ರ ಸ್ವಾಮಿ,ರಂಗಸ್ವಾಮಿಯ ಪರು ಸೇವೆಯನ್ನು ಪೂರ್ಣ ಮಾಡಿ ಕೊನೆಯಲ್ಲಿ 3 ದಿನಗಳ ಸುಗ್ಗಿಯ ಸಂಕ್ರಾಂತಿ ಹಬ್ಬವನ್ನು ಆಚಾರಣೆ ಮಾಡುವ ಮೂಲಕ ಧನೂರ್ಮಾಸ ಮುಕ್ತಾಯ ಜೊತೆ ಸಂಕ್ರಾಂತಿ ಹಬ್ಬವು ಪೂರ್ಣವಾಗಲಿದೆ.
ಶ್ರೀ ಮಲೈ ಮಹದೇಶ್ವರ ಬೆಟ್ಟದ ಬೇಡಗಂಪಣ ಬುಡಕಟ್ಟು ಸಮುದಾಯದ ಪರಂಪರೆಯಂತೆ ವಿಶೇಷವಾಗಿ ಶನಿವಾರ,ಬಾನುವಾರ,ಸೋಮವಾರ ಮಾದಪ್ಪನ ಸನ್ನಿಧಿಯಲ್ಲಿ ಆಚಾರಣೆ ಸುಣ್ಣ ಬಣ್ಣ ಬಳಿದು ಮನೆ ಹಾಗೂ ಜಾನುವಾರುಗಳ ಕೊಟ್ಟಿಗೆಯನ್ನು ಶುಚ್ಚಿತ್ವವನ್ನು ಮಾಡಿ.
ಉತ್ತರಾಣಿ ಸೋಪು,ಬೇವಿನ ಸೋಪು,ಗಂಡು ಅಣೆಸೋಪಿನ ಹೂವಿನ ಗುಚ್ಚದೂಂದಿಗೆ ಮಾವಿನ ತಳಿರು ತೋರಣಗಳಲಿಂದ ಶ್ರೀ ಮಹದೇಶ್ವರ ಸ್ವಾಮಿಯ ದೇವಾಲಯ ಹಾಗೂ ಸಾಲೂರು ಮಠದ ಗದ್ದುಗೆಗಳಲ್ಲದೆ ಶೇಷಣ್ಣನ ಒಡೆಯರ ಗದ್ದುಗೆ,ಶಿವನವ್ವನ ಸನ್ನಿಧಿ,ಹೆತ್ವನ ಗುಡ್ಡೆಯ ಸಪ್ತ ಮಾತೆಯರ ಗದ್ದುಗೆ ಸೇರಿದಂತೆ ದನಗಳ ಕೊಟ್ಟಿಗೆ,ಹಿರಿಯ ಪೂರ್ವಿಕರ ಸಮದಿಗಳಿಗೆ ಕಾಪು ಕಟ್ಟಿ ಸುಗ್ಗಿ ಸಂಕ್ರಾಂತಿ ಪ್ರರಂಭವಾಗಲಿದೆ.
ಎರಡನೇಯ ದಿನ ಬೆಳಗಿನ ಜಾವ ಮಲೈ ಮಹದೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ ಪೂಜಾಕಾರ್ಯಗಳು ಸೂರ್ಯೋದಯಕ್ಕೂ ಮುನ್ನ ಪೂರ್ಣಗೂಂಡ ನಂತರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೇಡಗಂಪಣ ಕುಲಗುರುಗಳು ಸಾಂಪ್ರಾದಾಯಂತೆ ಮನೆ ಮನೆಗಳಿಗೆ ತೆರಳಿ ಗೃಹ ಪ್ರವೇಶ ಮಾಡಿ ಪಾದಾರ್ಪಣೆ ಮಾಡಿ. ಬೇಡಗಂಪಣ ಶಿಷ್ಯ ಪರಂಪರೆಯಿಂದ ಪಾದಪೂಜೆಯನ್ನು ಪಡೆದು ಉಪವಾಸದಿಂದ ಮಾಡಿದ ನೈವೇದ್ಯವನ್ನು ಗುರುಗಳು ಪ್ರಸಾದವನ್ನು ಸ್ವೀಕರಿಸಿದ ನಂತರವೇ ಬೇಡಗಂಪಣ ಹಬ್ಬದ ಪ್ರಸಾದವನ್ನು ಮಾಡುವೂದು ಒಂದು ವಿಶಿಷ್ಟ ಆಚಾರಣೆ ಪದ್ದತಿಯಾಗಿದೆ. ಈ ಹಬ್ಬದಲ್ಲಿ ಮಾತ್ರ ಬೇಡಗಂಪಣ ಕುಲಗುರುಗಳು ನೆರವಾಗಿ ಮನೆಗೆ ಬಂದು ಸುಗ್ಗಿ ಸಂಕ್ರಮಣದಲ್ಲಿ ಬೇಡರ ಕುಲಕ್ಕೆ ಆಶಿರ್ವಾದ ಮಾಡುವ ಪರಂಪರೆಯಾದ್ದು.
ಮಲೈ ಮಾದೇಶ್ವರ ಸ್ವಾಮಿಯ ಪೂಜಾ ಕೈಕಾರ್ಯದಲ್ಲಿ ಬೇಡಗಂಪಣ ಕುಲಗುರುಗಳ ಸಾನಿತ್ಯದಲ್ಲಿ ಸಂಪ್ರದಾಯದ ಪದ್ದತಿಯಂತೆ ಮಹದೇಶ್ವರ ಸ್ವಾಮಿಗೆ ಮಹಾ ನೈವೇದ್ಯ ಸೇರಿದಂತೆ ಸೇರಿದಂತೆ ವಿವಿಧ ಪೂಜಾ ಕಾರ್ಯದಲ್ಲಿ ದೇವಾಲಯದಲ್ಲಿ ಮಾತ್ರ ಬೇಡಗಂಪಣ ಶಿಷ್ಯ ಪರಂಪರೆಗೆ ಎರಡನೇಯ ಮಹದೇಶ್ವರ ಸ್ವರೂಪಿಯಾಗಿ ಆಶಿರ್ವಾದ ನೀಡಿದರೆ.
ಈ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬೇಡಗಂಪಣ ಕುಲದ ಶಿಷ್ಯ ಪರಂಪರೆಯ ಒಕ್ಕಲು ನೆಲೆಸಿರುವ ಮನೆಗಳಿಗೆ ತೇರಳಿ ಶಿವಪೂಜೆಯನ್ನು ಮಾಡಿ ಪಾದಪೂಜೆಯನ್ನು ಪಡೆದು ಪವಿತ್ರ ತೀರ್ಥದ ಕಟ್ಟಲ್ಲೆಯನ್ನು ನೀಡಿ ಬೇಡಗಂಪಣ ಕುಲದ ಜಗತ್ಗುರುವಾಗಿ ಆಶಿರ್ವಾದ ಮಾಡಿ ಹರಸುವುದು ವಿಶೇಷ.
ಪ್ರತಿಯೋಬ್ಬರ ಮನೆಯಲ್ಲಿಯು ಕುಂಬಳ ಕಾಯಿ,ರಾಗಿ ರೊಟ್ಟಿ ಮೊಸರನ್ನ ಪ್ರಸಾದದ ಜೋತೆಗೆ ಸಿಹಿ ಪಾಯಸವನ್ನು ಮಾಡುವುದು ಪದ್ದತಿಯಾಗಿದೆ.
ಮೂರನೇ ದಿನ ವಿಶೇಷವಾಗಿ ಬೆಳಗಿನ 5.00 ಗಂಟೆಯಲ್ಲಿ ಬೇಡಗಂಪಣ ಸರದಿಯ ಅರ್ಚಕರಿಂದ ಭಜನೆಯ ಪೂಜಾ ಕೈಕಾರ್ಯಗಳೂಂದಿಗೆ ಸಾಲೂರು ಬೃಹನ್ಮಠದ ಪಟ್ಟದ ಶ್ರೀ ವಿದ್ವಾನ್ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಾನಿತ್ಯದಲ್ಲಿ ದೇವಾಲಯ ದಕ್ಷಿಣ ದ್ವಾರದ ಮೇಲ್ಭಾಗದಲ್ಲಿನ ಆಲಂಬಾಡಿ ಬಸವೇಶ್ವರ ಸ್ವಾಮಿಗೆ ಸರದಿಯ ಅರ್ಚಕರಿಂದ ಉಪವಾಸ ವಿದ್ದು ಬಾಯಿಗೆ ಬಟ್ಟೆಯನ್ನು ಕಟ್ಟಿಕೊಂಡು.
ಮಜ್ಜನ ಬಾವಿಯಿಂದ ಅಗ್ರೋದಕವನ್ನು ತದ್ದು ಜಲಾಭಿಷೇಕ,ಕ್ಷೀರಾಭಿಷೇಕ,ಪಂಚಾಮೃತ ಅಭಿಷೇಕ ಹಾಗೂ ಶತನಾಮ ಬಿಲ್ವಾರ್ಚನೆಯನ್ನು ಮಾಡಿ ಬಸವನ ಕೊಂಬಿಗೆ ಕೊಂಬಿನ ಕವಚ ಧಾರಣೆಯ ಜೋತೆಗೆ ಅಲಂಕಾರವನ್ನು ಮಾಡಿ.
ದೂಪ ದೀಪಾದ ಕರ್ಪೂರದಾರತಿಯ ಮಹಾ ಮಂಗಳಾರುತಿಯ ಸೇವೆಯನ್ನು ಪೂರ್ಣ ಮಾಡಿ.
ಬೇಡಗಂಪಣರ ಸಂಕ್ರಾಂತಿ ಹಬ್ಬದ ಮಹಾ ನೈವೇದ್ಯ ಅರ್ಪಣೆ
ವನಕ್ಕೆ,ಕತ್ತಿ,ಬೆಳ್ಳಿಯ ಬೇತ,ನರ್ಲೆ,ದನಗೋಲು ಇಟ್ಟು ಆಲಂಬಾಡಿ ಬಸವನಿಗೆ ನೆಲೆಗಡಲೆ,ಹಸಿ ಅಕ್ಕಿ ತಂಬಿಟ್ಟು ಹಾಗೂ ಸಿಕಳಿಯ ಎಳ್ಳಿಣ ತಂಬಿಟ್ಟು ನೈವೇದ್ಯವನ್ನು ಮಾಡಿ ನಂತರ ಬಂದು ದೇವಾಲಯದ ಗೋವುಗಳಿಗೆ ವಿಶೇಷವಾಗಿ ಗೋ ಪೂಜೆಯನ್ನು ಮಾಡಲಾಯಿತು.
ಇದೆ ರೀತಿಯಲ್ಲಿ ಸಮಸ್ತ ಬೇಡಗಂಪಣರು ಸಹ ಅವರವರ ದೊಡ್ಡಿಗಳಲ್ಲಿ ಏಕಕಾಲಕ್ಕೆ ಆಲಂಬಾಡಿ ಬಸವನಿಗೆ ಪೂಜೆ ಪ್ರರಂಭವಾಗುತ್ತಿದ್ದತೆ ಅವರ ದೂಡ್ಡಿಯಲ್ಲಿನ ದನದ ಸಗಣಿಯಿಂದ ಆಲಂಬಾಡಿ ಬಸವನ ಪ್ರತಿಮೆಯನ್ನು ಮಾಡಿಕೊಂಡು ಇದೆ ರೀತಿಯಲ್ಲಿ ಪೂಜೆಯನ್ನು ಮಾಡುವುದು ಬೇಡಗಂಪಣರ ಸುಗ್ಗಿ ಸಂಕ್ರಾಂತಿಯ ಪದ್ದತಿಯಾಗಿದೆ.
ಆದೇ ರೀತಿಯಲ್ಲಿ ಸಂಜೆಯ ಸಮಯದಲ್ಲಿ ದೊಡ್ಡಿಯ ಮುಂದೆ ಕಿಚ್ಚು ಹಾಯಿಸಿ ಗೋವುಗಳಿಗೆ ಪೂಜೆಯನ್ನು ಮಾಡುವುದಲ್ಲದೆ ವಿಶೇಷವಾಗಿ ಕಾಡಿನಲ್ಲಿ ಇರುವರು ಗುಳ್ಳೆ ದಿಂಬದ ಬಸವ,ಕಣಿವೆ ಬಸವ,ಬಾಳೆ ಕಲ್ಲು ಬಸವ,ಇಂಡಿ ಬಸವ,ಊರು ಒಡ್ಡಿನ ಬಸವ,ಉಗ್ಗಿ ಬಸವ,ಗಾಳಿ ಬಸವ,ಮೊಗವರೆ ಬಸವ , ಬಂಡಳ್ಳಿ ಬಸವ,ಚಂಡಿ ಬಸವ,ಕಾವೇರಿ ಹೊಳೆ ಬಸವ ಸನ್ನಿಧಿಯಲ್ಲಿ ಸಂಪ್ರದಾಯದಂತೆ ಪೂಜೆಗಳು ಬೇಡಗಂಪಣರಿಂದ ನಡೆಯುವುದು ಸಂಕ್ರಾಂತಿ ಹಬ್ಬದ ವಿಶೇಷವಾದೆ.
ಮುಸ್ಸಂಜೆಯವತಿನಲ್ಲಿ ಕಿಚ್ಚು ಹಾಯಿಸುವುದು.
ಸಂಜೆ 5.30 ಸಮಯದಲ್ಲಿ ದೇವಾಲಯ ಮುಂಭಾಗದಲ್ಲಿ ದೇವಾಲಯದ ಗೋ ಶಾಲೆಯ ದನ ಕರುಗಳನ್ನು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಾನಿತ್ಯದಲ್ಲಿ ಹುಲ್ಲಿಗೆ ದಿವಟಿಗೆಯಿಂದ ಬೆಂಕಿ ಹಚ್ಚಿ ದನಕರುಗಳನ್ನು ಕಿಚ್ಚು ಹಾಯಿಸಿದ ನಂತರ ವಿಶೇಷ ಬೆಳ್ಳಿ ಬಸವ ವಾಹನ ಉತ್ಸವದಲ್ಲಿ ಸಕಲ ಛತ್ರಿ ಚಾಮರಗಳ ಸಮೇತವಾಗಿ ಮಂಗಳ ವಾದ್ಯಗಳ ಸಮೇತ ಒಂದು ಸುತ್ತು ಉತ್ಸವನ್ನು ಮಾಡಿ ಸಂಕ್ರಾಂತಿ ಹಬ್ಬದ ಬರುವ ಭಕ್ತರಿಗೆ ಶ್ರೀ ಸ್ವಾಮಿಯ ಪ್ರಸಾದವನ್ನು ನೀಡುವ ಮೂಲಕ ಸಂಕ್ರಾತಿಯ ಹಬ್ಬ ಮುಕ್ತಾಯವಾಗಲಿದೆ.
ಇದೇ ರೀತಿಯ ಬರಗೂರು ಬೆಟ್ಟ ಹಾಗೂ ಹಾಸನೂರು ವ್ಯಾಪ್ತಿಯಲ್ಲಿಯು ಸಹಾ ಬೇಡಗಂಪಣ ಕುಲಗುರುಗಳಾದ ದ್ರೋಣಗೇರೆ ಮೇಗಲ ಮಠದ ಶ್ರೀ ಅಶೋಕ ರಾಜೇಂದ್ರ ಸ್ವಾಮಿಗಳು ಹಾಗೂ ದ್ರೋಣಗೇರೆ ಕೇಳಗಲ ಮಠದ ಶ್ರೀ ಸುಬ್ರಹ್ಮಣ್ಯ ಸ್ವಾಮಿಗಳವರಿಂದ ಬೇಡಗಂಪಣ ಬುಡಕಟ್ಟು ಪರಂಪರೆಯಂತೆ ಹಬ್ಬವನ್ನು ಮಾಡುವುದರ ಜೋತೆಗೆ ಅರಬಗೇರೆ ಸಿದ್ದೇಶ್ವರ ಸ್ವಾಮಿ,ದೇವರ ಬೆಟ್ಟದ ಪಂದೇಶ್ವರ,ಸುಳ್ಳವಾಡಿಯ ಬ್ರಹ್ಮೇಶ್ವರ ಸ್ವಾಮಿ ಹಾಗೂ ಬೋಮ್ಮೇಶ್ವರ ಸ್ವಾಮಿಯ ದೇವಾಲಯಗಳಲ್ಲಿಯು ಸಹ ಸಂಕ್ರಾಂತಿ ಹಬ್ಬ ಆಚರಣೆ ಶ್ರದ್ದ ಭಕ್ತಿಯಿಂದ ಜರುಗತ್ತದೆ.
Негізгі бет Музыка ಮಾದಪ್ಪನ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ | Male Mahadeshwara Betta
Пікірлер