Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಎರಡನೇ ಹಂತದ ಗಜಪಡೆ ಪ್ರಯಾಣಕ್ಕೆ ಕೊಡಗಿನ ಸಾಕಾನೆ ಶಿಬಿರದಿಂದ ಬೀಳ್ಕೊಡಲಾಯಿತು. ದುಬಾರೆ ಸಾಕಾನೆ ಶಿಬಿರದಿಂದ ಪ್ರಶಾಂತ ಹಾಗೂ ಸುಗ್ರೀವ ಆನೆಗಳು ಮತ್ತಿಗೋಡು ಆನೆ ಶಿಬಿರದಿಂದ ಮಹೇಂದ್ರ, ದೊಡ್ಡ ಹರವೇ ಶಿಬಿರದಿಂದ ಲಕ್ಷ್ಮೀ ಆನೆ ಮತ್ತು ರಾಮಂಪುರ ಆನೆ ಶಿಬಿರದಿಂದ ಹಿರಣ್ಯ ಆನೆಗಳು ಮೈಸೂರಿನತ್ತ ಪ್ರಯಾಣ ಬೆಳಸಿವೆ. ಈಗಾಗಲೇ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರಶಾಂತ ಮತ್ತು ಸುಗ್ರೀವ ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಸಾಕಾನೆಗಳೊಂದಿಗೆ ಮಾವುತರು ಮತ್ತು ಕಾವಾಡಿಗಳು ಸೇರಿದಂತೆ ಅವರ ಕುಟುಂಬ ಸದಸ್ಯರು ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೇ ಈಗಾಗಲೇ ಆನೆಗಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು ಎಲ್ಲಾ ಅನೆಗಳ ಆರೋಗ್ಯ ಸ್ಥಿರವಾಗಿದೆ. ಮುಂದಿನ ದಿನಗಳಲ್ಲಿ ದಸರಾ ಉತ್ಸವಕ್ಕೆ ಹೆಚ್ಚುವರಿಯಾಗಿ ಸಾಕಾನೆಗಳು ಬೇಕಾದಲ್ಲಿ ಇರಲಿ ಎಂದು ದುಬಾರೆ ಸಾಕಾನೆ ಶಿಬಿರದಿಂದ ಇನ್ನು ಎರಡು ಆನೆಗಳನ್ನು ಕಳಿಸಲಾಗುತ್ತದೆ ಎಂದು ಸಾಕಾನೆ ಶಿಬಿರದ ವೈದ್ಯರು ತಿಳಿಸಿದ್ದಾರೆ.
Suvarna News Live: www.youtube.co...
#mysore #dasara2024 #jambusavari
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
KZitem ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
Негізгі бет ಮೈಸೂರು ದಸರಾ ಮಹೋತ್ಸವಕ್ಕೆ ಎರಡನೇ ಹಂತದ ಗಜಪಡೆ ಪ್ರಯಾಣ | Mysore Dasara 2024 | Jamboo Savari | Suvarna News
Пікірлер: 1