ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಮೇ 30 ರಂದು ರವಿಚಂದ್ರನ್ ತಮ್ಮ 61ನೇ ವಸಂತಕ್ಕೆ ಕಾಲಿಡಲಿದ್ದಾರೆ. ರವಿಚಂದ್ರನ್ ಅವರ ಕುರಿತಾಗಿ ‘ವಿಜಯ ಕರ್ನಾಟಕ ವೆಬ್’ ಪ್ರಾರಂಭಿಸಿರುವ ‘ಕನಸುಗಾರನ ಕಹಾನಿ’ ವಿಶೇಷ ಸರಣಿಯಲ್ಲಿ ಮಾಸ್ಟರ್ ಮಂಜುನಾಥ್ ಮಾತನಾಡಿದ್ದಾರೆ.
‘’ನನಗೆ ‘ರಣಧೀರ’ ಸಿನಿಮಾ ಕಮರ್ಷಿಯಲ್ ಆಗಿ ಹೆಸರು ತಂದುಕೊಟ್ಟಿತು. ಸಿನಿಮಾದಲ್ಲಿ ನನ್ನ ಮತ್ತು ರವಿಚಂದ್ರನ್ ಅವರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂತು. ರವಿಚಂದ್ರನ್ ಅವರಿಗೆ ಎಷ್ಟು ದೊಡ್ಡ ಮನಸ್ಸು ಅಂದ್ರೆ, ನನಗೆ ‘ಏನ್ ಹುಡ್ಗೀರೋ..’ ಹಾಡನ್ನ ಹಾಡೋದಕ್ಕೆ ಚಾನ್ಸ್ ಕೊಟ್ಟರು. ಅದಕ್ಕೆ ರವಿಚಂದ್ರನ್ ಅವರಿಗೆ ಮತ್ತು ಹಂಸಲೇಖ ಅವರಿಗೆ ಥ್ಯಾಂಕ್ಸ್ ಹೇಳಬೇಕು’’
‘’ಕಿಂದರಿ ಜೋಗಿ’ ಸಿನಿಮಾದಲ್ಲಿ ನನ್ನ ಪಾತ್ರ ಏನು. ನಾನ್ಯಾಕಿದ್ದೀನಿ ಅಂತ ಈಗಲೂ ಗೊತ್ತಿಲ್ಲ. ‘ಯುದ್ಧಕಾಂಡ’ ಸಿನಿಮಾದಲ್ಲೂ ನನ್ನ ಪ್ಲೇಸ್ಮೆಂಟ್ ಅವರಿಗೋಸ್ಕರ ಆಗಿದ್ದು’’
‘’ಯುದ್ಧಕಾಂಡ’ ಸಿನಿಮಾದಲ್ಲಿ ಪ್ರಾಸದ ಡೈಲಾಗ್ಸ್ ಹೇಳೋಕೆ ನನಗೆ ತುಂಬಾ ಕಷ್ಟ ಆಯ್ತು. ಆ ರಿದಮ್ಗೆ ತಕ್ಕ ಹಾಗೆ ಹೇಳೋಕೆ. ಅದು ತುಂಬಾ ಯುನೀಕ್ ಆಗಿತ್ತು. ರವಿಚಂದ್ರನ್ ಅವರಿಂದ ಕಲಿಯೋದು ತುಂಬಾ ಇದೆ. ಹ್ಯಾಟ್ಸ್ ಆಫ್ ಟು ಹಿಮ್’’
‘‘ಕೆಂಪು ತೋಟದಲ್ಲಿ..’ ಹಾಡಿನ ಶೂಟಿಂಗ್ ಮಾಡುತ್ತಿದ್ದಾಗ ನನಗೆ ತುಂಬಾ ಭಯ ಆಗುತ್ತಿತ್ತು. ಎಲ್ಲಿ ಯಾವ ಗಾಡಿ ಬಂದು ಗುದ್ದಿ ಬಿಡುತ್ತೋ ಅಂತ ಅನಿಸುತ್ತಿತ್ತು’’ ಎಂದು ಸಂದರ್ಶನದಲ್ಲಿ ಮಾಸ್ಟರ್ ಮಂಜುನಾಥ್ ಹೇಳಿದ್ದಾರೆ.
#MasterManjunath #VRavichandran #KanasugaranaKahani
Our Website : Vijaykarnataka.com
Facebook: / vijaykarnataka
Twitter: / vijaykarnataka
Негізгі бет Master Manjunath speaks about shooting experience with crazy star ravichandran | Vijay Karnataka
Пікірлер: 16