ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು
ಸಾವಿನ ಭಯವನ್ನು ಕಳೆದುಕೊಳ್ಳಬೇಕು ಎಂದು ಭಾಗವತ ಆದೇಶಿಸುತ್ತದೆ - “ಅಂತಕಾಲೇ ತು ಪುರಷ ಆಗತೇ ಗತಸಾಧ್ವಸಃ” ಎಂದು. ಗೆಲ್ಲಲ್ಲಿಕ್ಕೆ ಸಾಧ್ಯವಿಲ್ಲದ ಈ ಸಾವಿನ ಭಯವನ್ನು ಗೆಲ್ಲುವ ಕ್ರಮವನ್ನು ಭಗವದ್ಗೀತೆ ಮತ್ತು ದಾಸಸಾಹಿತ್ಯ ತಿಳಿಸಿರುವ ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಶ್ರೀ ಕನಕದಾಸಾರ್ಯರ “ಮುಟ್ಟಬೇಡಿ ಮುಟ್ಟಬೇಡಿ” ಎಂಬ ಹಾಡಿನ ಅರ್ಥಾನುಸಂಧಾನದೊಂದಿಗೆ.
ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು||
ಕಟ್ಟು ಮಾಡಿದನಂತೆ ಯಮ ತನ್ನ ದೂತರಿಗೆ||
ತಿರುಮಣ್ಣು ಶ್ರೀಚೂರ್ಣ ಪೂರ್ಣ ದ್ವಾದಶ ನಾಮåç
ಸಿರಿತುಳಸಿ ವನಮಾಲೆ ಕೊರಳಿನೊಳಗೆ ಇಪ್ಪವರ|
ತಿರುಮಂತ್ರ ತೀರ್ಥ ಪ್ರಸಾದ ಕೊಳಗಾದವರ
ತಿರುಪತಿಯ ಯಾತ್ರೆಯನು ಮಾಡಿದ ಮಹಾತ್ಮರನು||
ಬಡವನಾಗಲಿ ಅವನು ಬಲ್ಲಿದನು ಆಗಲಿ
ಕಡುಮೂರ್ಖ ಘೋರ ಪಾತಕಿಯಾಗಲಿ|
ನುಡಿ ನುಡಿಗೆ ಮಾಧವನ ಬಿಡದೆ ಕೊಂಡಾಡುವರ
ಗೊಡವೆ ಬೇಡೆಂದ ಯಮ ತನ್ನ ದೂತರಿಗೆ|
ವಾಸುದೇವ ಎಂಬ ವಾಕ್ಯವನ್ನು ಪಠಿಸುವರ
ಬೇಸರದೆ ಶ್ರೀಹರಿಯ ಧ್ಯಾನದೊಳಗಿಪ್ಪವರ|
ವಾಸುಕಿ ಶಯನ ಕಾಗಿನೆಲೆಯಾದಿ ಕೇಶವನ
ದಾಸರ ದಾಸರ ದಾಸನಂತೆಂಬವರ||
ವಿಶ್ವನಂದಿನಿಯಲ್ಲಿ ನಡೆಯುತ್ತಿರುವ ಶ್ರೀಮದ್ ಭಾಗವತದ ಮಹಾ ಜ್ಞಾನಯಜ್ಞದಲ್ಲಿನ ತುಣುಕು ಇದು. ಶ್ರೀಮದ್ ಭಾಗವತದ ಉಪನ್ಯಾಸಗಳು ಇಲ್ಲಿ ದೊರಯುತ್ತವೆ.
play.google.co...
www.vishwanandini.com
Негізгі бет Muttabedi Muttabedi Muraharana Dasaranu...
Пікірлер: 11