ಶ್ರದ್ಧೆ ಮತ್ತು ಭಕ್ತಿಯಿಂದ ಇವುಗಳನ್ನು ಮಾಡಿದರೆ ಫಲ ನಿಶ್ಚಿತ | ಅವಧೂತ ಶ್ರೀ ವಿನಯ್ ಗುರೂಜಿ
ಜ್ಞಾನಿಗಳ ಜಾತಿ ಹಾಗೂ ಹಿನ್ನೆಲೆ ತಿಳಿದುಕೊಳ್ಳುವ ಪ್ರಯತ್ನ ಯಾವತ್ತೂ ನಡೆಸಬಾರದು. ಪ್ರತಿಯೊಂದರಲ್ಲೂ ಪ್ರತಿಯೊಬ್ಬರಲ್ಲೂ ಇರುವ ಒಳಿತನ್ನಷ್ಟೇ ಪಡೆದುಕೊಳ್ಳಬೇಕೇ ವಿನಃ ಅವುಗಳ ಧರ್ಮ, ಜಾತಿ, ಹಿನ್ನೆಲೆಯನ್ನು ಕೆದಕಲು ಹೋಗಬಾರದು. ಸಾಧಕರು ಯಾವ ಮಾರ್ಗದಲ್ಲಿ ನಡೆದರು ಅನ್ನೋದಕ್ಕಿಂತ ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಅನ್ನುವುದು ಮುಖ್ಯವಾಗಿರುತ್ತದೆ. ಅವುಗಳನ್ನು ನಾವು ಹಿಂಬಾಲಿಸಬೇಕಿದೆ. ಧರ್ಮ, ಭಕ್ತಿಯಲ್ಲಿ ಶ್ರೇಷ್ಠ ಅಥವಾ ಕನಿಷ್ಠ ಅನ್ನುವ ಮಾತಿಲ್ಲ. ಭಕ್ತಿಯಲ್ಲಿ ನಮ್ಮ ಕಾಯಾ, ವಾಚಾ, ಮನಸ್ಸಾ ಶುದ್ದವಾಗಿದ್ದರೆ ಸಾಕು. ಶ್ರದ್ಧೆ ಮತ್ತು ಭಕ್ತಿಯಿಂದ ಭಗವಂತನಲ್ಲಿ ಕೇಳಿದರೆ ಖಂಡಿತ ಫಲ ಸಿಗುತ್ತದೆ. ಮೈ ತುಂಬಾ ತಾಯತಗಳನ್ನು ಕಟ್ಟುವ ಬದಲು ಭಕ್ತಿಯಿಂದ ಇಷ್ಟ ದೇವರ ಒಂದೇ ಒಂದು ತಾಯತ ಕಟ್ಟಿದರೂ ಸಾಕಾಗುತ್ತದೆ.
Негізгі бет ಶ್ರದ್ಧೆ ಮತ್ತು ಭಕ್ತಿಯಿಂದ ಇವುಗಳನ್ನು ಮಾಡಿದರೆ ಫಲ ನಿಶ್ಚಿತ | ಅವಧೂತ ಶ್ರೀ ವಿನಯ್ ಗುರೂಜಿ
Пікірлер: 12