ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಬಗ್ಗೆ
ನಾಡಿನ ಖ್ಯಾತ ವಿದ್ವಾಂಸರಾದ ಶ್ರೀ ಶತಾವಧಾನಿ ಆರ್.ಗಣೇಶ್ ಅವರು ರಚಿಸಿದ ಗೀತೆ
ಸಂಗೀತ ಸಂಯೋಜನೆ: ಕರ್ನಾಟಕ ಕಲಾಶ್ರೀ ವಿದ್ವಾನ್ ಕಾಂಚನ ವಿ ಸುಬ್ಬರತ್ನಂ ಮತ್ತು ವಿದುಷಿ ರೋಹಿಣೀ ಸುಬ್ಬರತ್ನಂ.
ಗಾಯನ: ರಘುನಂದನ ಬೇರ್ಕಡವು
ರಾಘವೇಶ್ವರ ಭಾರತೀ
ಗುರುದೇವ ವಂದಿಪೆ ವಿನಯದಿ
ರಾಘವೇಂದ್ರ ಯತೀಂದ್ರ ಕರಕಂಜಾತ ಜಾತವಿಶಾರದ
ಕರುಣೆ ಕಾವಿಯನುಟ್ಟಿತೇ
ವಾತ್ಸಲ್ಯ ದಂಡವ ಹಿಡಿಯಿತೇ
ವಿಸ್ಫುರಣೆ ಪಾದುಕೆ ಧರಿಸಿತೇ
ಕೌಶಲ್ಯ ಮಠದೊಳು ನೆಲೆಸಿತೇ
ಲೋಕಸಂಗ್ರಹ ಪಾಕವೆಲ್ಲವು ನಾಕದಿಂ ಧರೆಗಿಳಿಯಿತೇ
ಅಸ್ತೋಕ ದಿವ್ಯ ಅದ್ವೈತ ತತ್ತ್ವ ವಿವೇಕವೇ ಮಡುಗಟ್ಟಿತೇ
ಮೊಗವು ನಿರ್ಮಲ ಮಾನಸಸರೋವರವು ತಿಳಿಯೆನು ಸರ್ವಥಾ
ನಗುವು ನೀರ ಕ್ಷೀರ ಭಾಜಕ ಪರಮಹಂಸವು ಸರ್ವದಾ
ಜಗವು ಮಿಥ್ಯಾಮಾತ್ರವೆನ್ನುವ ಶಾಂಕರಾಗಮ ಸಾರವು
ಜಗಕೆ ನಿರ್ಮಮ ಸೇವೆ ಸಲ್ಲಿಪ ನಯದೊಳಿದೆ ಸಾಕಾರವು
ದಣಿವನಿಯರದ ತಣಿವನೊಲ್ಲದ ಗುಣಗಣಾಂಬುಧಿ ಸಂಯಮೀ
ಮಣಿವರಿಗೆ ತಾನಂತರಂಗದಿ ವಣಿವ ವಾಮನ ವಿಕ್ರಮೀ
ಕಲೆಯ ಪೂಜೆಯ ಕರ್ಮದೋಜೆಯ ಬೆಲೆಯ ಬಲ್ಲ ನಿರೀಹತೆ
ನೆಲೆಸಿ ಸಚ್ಚಿನ್ಮಾತ್ರಪೂರ್ಣಾನಂದದೊಳ್ ನಡೆವರ್ಹತೆ
Raghaveshwara Bharati | Gurudeva Vandipe Vinayadi..
Penned by: Shatavadhani Dr. R. Ganesh
Music composed by: Karnataka Kalasri Vidwan Kanchana V. Subbaratnam and Vidushi Rohini Subbaratnam
Sung by: Raghunandan Berkadavu
Негізгі бет Raghaveshwara Bharati Gurudeva Vandipe Vinayadi.. | ರಾಘವೇಶ್ವರ ಭಾರತೀ ಗುರುದೇವ ವಂದಿಪೆ ವಿನಯದಿ..
Пікірлер: 89