ಭಕ್ತನಾದವನಿಗೆ ಗುಣದೋಷಗಳ ಅರಿವಿರಬೇಕು. ಅಂತಃಕರಣದ ಶುದ್ಧಿ ಬಹುಮುಖ್ಯ. ಭಕ್ತಿ ಎಂಬುದು ಒಂದು ಬಗೆಯ ಭರವಸೆಯೂ ಹೌದು; ಅರಿವೂ ಹೌದು. ಇನ್ನು ಭಕ್ತನಾಗುವುದೆಂದರೆ ಶೀಕೃಷ್ಣ ಹೇಳಿದಂತೆ ದುರ್ಗುಣಗಳನ್ನು ಬಿಡಬೇಕು, ಚಿತ್ತಶುದ್ಧಿಯಾಗಬೇಕು. ಇಡಿಯ ಜಗತ್ತನ್ನೇ ಪ್ರೀತಿಸಬೇಕು. ಕಾಮನೆಗಳನ್ನು ತೊರೆದು ಯಾವುದನ್ನೂ ಬಯಸದ ಭಕ್ತಿ ನಮ್ಮದಾಗಬೇಕು. ಭಜಿಸು ಎಂದರೆ ತ್ಯಜಿಸು ಎಂದೇ ಅರ್ಥ. ಶರಣಾಗತನಾಗುವಾಗ ನಮ್ಮೊಳಗಿನ ಬಯಕೆಗಳನ್ನು ತ್ಯಜಿಸಿ ನೋವಿಗೆ ಕುಗ್ಗದೆ, ನಲಿವಿಗೆ ಹಿಗ್ಗದೆ ಸಮಭಾವ ಮತ್ತು ಚರಾಚರ ಜೀವಿಗಳಲ್ಲಿ ಸಮಾನತೆಯನ್ನು ಕಾಣುವುದರಿಂದ ಮನಸ್ಸು ಶಾಂತವಾಗಿದ್ದು ನಿಜಭಕ್ತನಾಗಲು ಸಾಧ್ಯ. ಅಂಥ ಭಕ್ತಿ, ಜಗತ್ತಿನ ಶಕ್ತಿಯೂ ಆಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ.
Негізгі бет Weekly Wisdom ಭಕ್ತಿ PART 1
Пікірлер: 1