ಭಗವಂತನೆಡೆಗೆ
ಆ ಭಗವಂತನ ಕುರಿತು ತಿಳಿಯುವುದಕ್ಕೆ ಒಂದು ಹೆಜ್ಜೆ ಹಾಕೋಣ. ಸಾಕ್ಷಾತ್ ಭಗವಂತನನ್ನು ತಿಳಿಯುವುದಕ್ಕೆ ಅಂತಲೇ ಇರುವಂತಹ ಮಾರ್ಗದರ್ಶನಗಳು ಎಂದರೆ ವೇದಗಳು, ಶಾಸ್ತ್ರಗಳು, ಪುರಾಣಗಳು, ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆ, ಈ ರೀತಿಯ ಅನೇಕ ಮಾರ್ಗಗಳನ್ನು ಸ್ವತಹ ಆ ಭಗವಂತನೇ ತನ್ನ ಕುರಿತು ತಿಳಿಯುವುದಕ್ಕೆ ಸೃಷ್ಟಿಸಿದ ಮಾರ್ಗಗಳು, ಇವುಗಳನ್ನು ಹೊರತುಪಡಿಸಿ ಬೇರೆ ಯಾವುದರ ಮುಖಾಂತರವೂ ಕೂಡ ನಾವು ಆ ಭಗವಂತನನ್ನ ತಿಳಿಯಲಾರೆವು. ಸಕಲ ಬ್ರಹ್ಮಾಂಡಗಳನ್ನೇ ಸೃಷ್ಟಿ ಮಾಡಿ ಆ ಬ್ರಹ್ಮಾಂಡದಲ್ಲಿ ಇರುವ ಪ್ರತಿಯೊಬ್ಬ ಜೀವಿಗಳಲ್ಲೂ, ವಸ್ತುವಿನಲ್ಲೂ, ಕುಳಿತು ನಮ್ಮ ಕರ್ಮಕ್ಕೇ ಅನುಸಾರವಾಗಿ ಪಾಪ ಪುಣ್ಯಗಳ ಫಲವನ್ನು ನೀಡುತ್ತಾ ನಮಗಾಗಿ ಶ್ರಮಿಸುತ್ತಿರುವ ಆ ಭಗವಂತನನ್ನ ನಾವು ತಿಳಿಯಲೇಬೇಕು. ನಮ್ಮ ಈ ಮನುಷ್ಯ ಜನ್ಮ ಬಂದಿದ್ದು ಕೇವಲ ನಮ್ಮ ಸ್ವಾರ್ತದ ಲೌಕಿಕ ಸುಖಗಳನ್ನು ಅನುಭವಿಸುವುದಕ್ಕೆ ಅಲ್ಲ. ಆ ಭಗವಂತನ ಕುರಿತು ತಿಳಿದು ಆತನಿಗೆ ಶರಣಾಗುವುದಕ್ಕೆ ಮಾತ್ರ. ನಮ್ಮ ನಿಮ್ಮೆಲ್ಲರ ಪೂಜೆ ಗುರುಗಳಾದ ಉಡುಪಿಯ ಶ್ರೀ ಅನಂತ ಕೃಷ್ಣ ಆಚಾರ್ಯರ ಮಧುರವಾದ ಕಂಠದಲ್ಲಿ ತಿಳಿಯೋಣ.
Пікірлер