#ನಾರಾಯಣ_ವರ್ಮ
ಸಕಲ ಋಷಿಗಳಲ್ಲಿ ಹರಿ ನಮ್ಮಸ್ವಾಮಿ ಯಾಗಿ ರಕ್ಷಿಸು।
ಜಲದಲ್ಲಿ ಮಚ್ಛಾವತಾರನಾಗಿ ರಕ್ಷಿಸು।
ಸ್ಥಳದಲ್ಲಿ ವಾಮನನಾಗಿ
ರಕ್ಷಿಸು ನಿಮ್ಮ ನೆನೆವರಾ॥೧॥
ಆಕಾಶದಲ್ಲಿ ತ್ರಿವಿಕ್ರಮನಾಗಿ ರಕ್ಷಿಸು।
ಭಯಗಳಲ್ಲಿ ನಾರಸಿಂಹ ನಾಗಿ।
ಮಾರ್ಗದಲ್ಲಿ ವರಾಹನಾಗಿ
ರಕ್ಷಿಸು ನಿಮ್ಮ ನೆನೆವರಾ॥೨॥
ಪರ್ವತಾಗ್ರದಲ್ಲಿ ಪರಶುರಾಮನಾಗಿ ರಕ್ಷಿಸು
ಪರದೇಶದಲ್ಲಿ ರಾಮಚಂದ್ರನಾಗಿ
ರಕ್ಷಿಸು ನಿಮ್ಮ ನೆನೆವರಾ॥೩॥
ಆಶ್ರಯದಲ್ಲಿ ನರನಾರಾಯಣನಾಗಿ ರಕ್ಷಿಸು।
ಅಯೋಗ್ಯರಲ್ಲಿ ದತ್ತಾತ್ರೇಯನಾಗಿ ರಕ್ಷಿಸು।
ಕರ್ಮಬಂಧಗಳೆಲ್ಲಾ ಕಳೆದು ರಕ್ಷಿಸು
ಕಪಿಲಮೂರ್ತಿಯಾಗಿ ॥
ಪ್ರಾತಃಕಾಲದಲ್ಲಿ ಕೇಶವ ನಮ್ಮ ರಕ್ಷಿಸು॥
ಸಾಯಂಕಾಲದಲ್ಲಿ ಗೋವಿಂದ ನಮ್ಮ ರಕ್ಷಿಸು ॥
ಅಪರಾಹ್ನಕಾಲಗಳೆಲ್ಲ ಕಳೆದು ರಕ್ಷಿಸು
ನಮ್ಮ ಸಕಲ ಕಾಲಗಳೆಲ್ಲ ನರಕದಿಂದ
ಕೂರ್ಮನಾಗಿ ರಕ್ಷಿಸು ।
ವಿಪತ್ತಿನಿಂದ ಧನ್ವಂತರಿ ರಕ್ಷಿಸು ।
ಅನ್ಯ ದೇವತೆ ಭಜನೆ ಕಳೆದು ರಕ್ಷಿಸಯ್ಯ ॥
ಶ್ರೀಕೃಷ್ಣ ಮೂರುತಿಯಾಗಿ ಅಜ್ಞಾನ ವಿಷಯಗಳ
ಕಳೆದು ರಕ್ಷಿಸು।
ವೇದವ್ಯಾಸಮೂರುತಿಯಾಗಿ।
ಕೃಷ್ಣನ ಶಂಖವೇ ನಿಮ್ಮ ಧನಿದುರಿ
ರಾಕ್ಷಸರ
ಎದೆ ಒಡೆಸಿ ಭಯ ಬಿಡಿಸಿ ಲಯವನೆ
ಮಾಡಿಸಿ।
ಪೂತ ಗಂಧರ್ವರು ಕೂಷ್ಮಾಂಡ ತೋರಿಸಲು
ವಿಷ್ಣು ಗದೆ ರಾಕ್ಷಸರು ಒಡೆದು
ಚೂರ್ಣವ ಮಾಡಿ।
ಕಿಡಿಗಳಂತೆ ಭೂಮಿಯ ಮೇಲೆ ಆಧರಿಸಿ।
ಶತಚಂದ್ರ ಪ್ರಭೆಯಂತೆ ಹೊಳೆವ ಹರಿಯು।
ನಮ್ಮ ಮತಿವಂತರು ವೈರಿಗಳ ಕಣ್ಣಿಗೆ
ಕಾಣಬಾರದು ಮಾಡಿ ।
ತೋರಿಸಿ ತಮ್ಮ ದಿವ್ಯ ತೇಜಗಳ ।
ಧರ್ಮ ವಿಷಯದಲಿ ಹಯಗ್ರೀವನಾಗಿ
ರಕ್ಷಿಸು ॥
ಮಧ್ಯಾಹ್ನಕಾಲದಲ್ಲಿ
ಮಧುಸೂದನನಾಗಿ ರಕ್ಷಿಸು
ಸಾಯಂಕಾಲದಲಿ ಶ್ರೀ ವತ್ಸ ಮೂರ್ತಿಯಾಗಿ
ಉಷಃ ಕಾಲದಲ್ಲಿ ಜನಾರ್ಧನನಾಗಿ
ರಕ್ಷಿಸು ॥
ತ್ರಿಸಂಧ್ಯಾಕಾಲದಲ್ಲಿ ಹೃಷಿಕೇಶನಾಗಿ
ಅಪರಾತ್ರಿಯಲ್ಲಿ ರಕ್ಷಿಸಯ್ಯ
ಶ್ರೀವತ್ಸ ಮೂರುತಿಯಾಗಿ
ಸಾಮವೇದಕೆ ಅಭಿಮಾನಿಯಾದ
ಗರುಡವಾಹನನೆ।ಸಲಹೆನ್ನ
ವಿಷದ ಭಯಗಳ ಬಿಡಿಸಿ
ಕೃಷ್ಣ ಮುಕುಟಾಧರನೆ ರಕ್ಷಿಸೋ ॥
ನಮ್ಮನ್ನು ಪ್ರಾಣೇಂದ್ರಿಯದಿಂದ
ಬುದ್ಧಿಯಿಂದ ದಿಕ್ಕು ದಿಕ್ಕುಗಳಲ್ಲಿ
ನಾರಸಿಂಹ ಮೂರುತಿಯಾಗಿ।
ನಾರಸಿಂಹ ನಾದಗಳಿಂದ ಎಲ್ಲ ಪರಿಯಿಂದ
ಭಕ್ತರನೆಲ್ಲ ನರಹರಿ ಇದ್ದು ರಕ್ಷಿಸೋ॥
ಗುರು ಮಧ್ವರಾಯರ ಗುರು
ವಿಶ್ವ ವ್ಯಾಪಕರ
ಸುವಿಷ್ಣು ವೈಷ್ಣವರ ಮಗನಂತೆ ನಿಮ್ಮ
ಸುನಾಮಎಂದು ಪಾಡಿ ಸುಖಿಯಾಗಿ
ಜಮದಗ್ನಿ ವತ್ಸ, ಪ್ರಹ್ಲಾದ ವರದ
ಅಸುರರ ಗೆಲಿದ ಬಲರಾಮ
ಜಾನಕಿ ವಲ್ಲಭ ಜಯ ಜಯ ರಾಮ ॥
ನಿತ್ಯ ವೈಕುಂಠ ನಿಜ ಗೋವಿಂದ
ಅಂಬರೀಷರಾಯಗೆ ವರಗಳ ಕೊಟ್ಟ
ನಂಬಿದ ಭಕ್ತರಿಗೆ ಅಭಯ ಕೊಟ್ಟ
ಯಶೋದೆಯ ಮನ ಉದ್ಧರಿಸಿದ
ಹಯವದನ ರಕ್ಷಿಸು॥
ಇಂತು ಷಷ್ಟಮಸ್ಕಂದ
ಅಷ್ಟಮೋಧ್ಯಾಯ ಇಂದ್ರನಿಗೆ
ಉಪದೇಶಿಸಿದ ನಾರಾಯಣ ವರ್ಮ
ಸಂಪೂರ್ಣಂ॥
#ಲಕ್ಷ್ಮೀ ಹೃದಯ
ದೇವಿ ತಾನು ಶ್ರೀ ಧಾಮನ್ನ ಮನೆಯಲ್ಲಿ
ಆದಿ ಅಂತ್ಯಗಲ್ಲದಿರಲು ಚೌದ್ಯಸುಖ
ರೂಪದಿಂದ ಅವಳಿಗೆ ವೇದವಾಲೆಗಳು
ಓದುತ್ತಿರಲು ಅವಳಿಂದ ಹರಿಯು ಮೂರು ಮನೆಗಳಿಪ್ಪಾಲಯ ಕೇತನ ಭಯವಿಲ್ಲ.
ಮೊದಲೆ ಉದಕವಿಲ್ಲ ಆದಕಾರಣದಿಂದ
ಮುದಿ ತಾನಾದಳು ಅಚ್ಯುತಗೆ ಅಂಬುಧಿಯಾದಳು
ಆಗ ಮಹಾಲಕುಮಿ ಅಂಬರದ ಆಭರಣವಾದಳು ಹೊಂಬಣ್ಣಧ ಆಲದೆಲೆಯಾದಳು ಏನೆಂಬೆ ಇವಳ ಸಾಹಸಕ್ಕೆ
ಶ್ರೀಭೂದುರ್ಗೆಯ ಆಲಿಸಿದನು ಹರಿಯು
ತಾ ಆಲದ ಎಲೆಯ ಮೇಲೆ ಮಲಗಿದನು,
ಅಚ್ಚುತನ ಹೃದಯದಲೆ ಲಿಂಗ ವಿಶಿಷ್ಟರಾದ ಇನಿತು ಜೀವ ಹಿಡಿದು ತುಂಬಿಕೊಂಡು ತನಯನ ನೂರು ವರ್ಷ ಪರಿಯಂತದಿ ವನಜಾಕ್ಷ ವಟಪತ್ರ ಶಯನನಾಗಿ ಜನರೆಲ್ಲ
ತಮ್ಮ ಗತಿಗೆ ತಕ್ಕ ಸಾಧನವ ಸಾಧಿಸಿಕೊಳ್ಳ
ಲೆಂದು ಕರುಣಿ ಪುನರಪಿ
ಸೃಷ್ಟಿಯ ಮಾಡುವೆನೆಂದು ಲಾಲನೆಗೆ ಪ್ರಕೃರ್ತಿಯ ಮಮತೆಯಿತ್ತು
ಗುಣತ್ರಯಾತ್ಮಕ
ಸೂಕ್ಷ್ಮ ತತ್ವ ರಸಿಯ ಜೀವರನು ಸೃಜಿಯಿದನು ಹಯವದನನು ||
Негізгі бет ದುಃಖ ದಾರಿದ್ರ್ಯ ದೂರಾಗಲು ಲಕ್ಷ್ಮೀ ನಾರಾಯಣ ರಂಗೋಲಿ ವ್ರತ lakshmi narayana hruday rangoli vrata
Пікірлер: 307