ಹಾಡಿದವರು_ಸುತೇಜಾ ಮೋಹನ ಹೆಗಡೆ ಅಳವಳ್ಳಿ
ಹಾಡಿನ ಸಾಹಿತ್ಯ
ಕೊಡುತೇವೆ ಗಿರಿಜೆಯನು | ಕೈಲಾಸದ ಮೃಡನಿಗೆ ಪಾರ್ವತಿಯಾ|| ಕೊಡುತೇವೆ ಗಿರಿಜೆಯ ಮೃಡ ಕೈಲಾಸಗೆ| ಕಡುಮೋಹದಿಂದ ಸಾಕಿದ ನಮ್ಮ ಮಗಳಾ||ಪ||
ದಕ್ಷಯಜ್ಞವನು ಮಾಡಿ ದರ್ಪದಿ ತನ್ನ ದಾಕ್ಷಾಯಣಿ ಮರೆತ||ದಕ್ಷಯಜ್ಞವ ಕೆಡಿಸಬೇಕೆನುತಲೆ ದಾಕ್ಷಾಯಣಿ ಯಜ್ಞಕುಂಡ ಹಾರಿದಳು||೧||
ಉರಿವ ಕಿಚ್ಚಿನಲಿ ಬಿದ್ದು ಮಾಯವಾದಳು ಮಾರಹರನ ಸರಿಯು|| ಸುರರು ಭೂಸುರರು ಮೂರ್ಲೋಕವು ನಡುಗಲು ಮುರಹರನ ಸತಿಯು ಮಾಯವಾದಳು ಎಂದು||೨||
ಶಕ್ತಿ ಮಾಯವಾಯಿತು ಭಕ್ತರು ನಿಶ್ಯಕ್ತರಾದರು ಎಂದು|| ಭಕ್ತವತ್ಸಲ ಎನ್ನ ರಕ್ಷಿಸಬೇಕೆಂದು ಭಕ್ತರೆಲ್ಲರು ಮೊರೆಯಿಟ್ಟು ಬೇಡಿದರು||೩||
ಸುರರ ಮೊರೆಯನ್ನು ಕೇಳಿ ಶಕ್ತಿಯು ತಾ ಗಿರಿಯೊಳಗುದಯಿಸಿತು ||ಗಿರಿಧಾಮನ ತೊಡೆಯ ಮೇಲಾಡಿ ನಲಿಯುತ್ತ ತಾ ಗಿರಿಸುತೆ ಎಂಬ ನಾಮವನು ಧರಿಸಿದಳು||೪||
ಬಾಲಚಂದ್ರಮನಂತೆ ಗಿರಿರಾಯನ ತೋಳಮೇಲಾಡುತಲಿ||ಬಾಲಲೀಲೆ ಕಳೆದು ಕಂಗೊಳಿಸುತಿರಲು ವರಸಪ್ತ ಋಷಿಗಳು ಕೇಳುವಲೆ ಬಂದರು ||೫||
Негізгі бет Havyaka haadu_Vaagdaana 3 ಹವ್ಯಕ ಹಾಡು_ವಾಗ್ದಾನ/ಹೆಣ್ಣು ಕೇಳಿದ್ದಕ್ಕೆ ಉತ್ತರ(ಕೊಡುತೇವೆ ಗಿರಿಜೆಯನು)
Пікірлер: 4