ತಾಯಿ ದುರ್ಗಾ ದೇವಿ ನಮ್ಮನ್ನು ರಕ್ಷಿಸು ಎಂಬ ಕಳಕಳಿಯ ಪ್ರಾರ್ಥನೆಯ ವಿಶೇಷ ಅರ್ಥ ಅನುಸಂಧಾನವನ್ನು ನೀಡುವ. ಬಲ್ಲಟಗಿ ಗುಂಡಾಚಾರ್ಯರ ( ಶ್ರೀ ಶ್ಯಾಮಸುಂದರ ದಾಸರ ) ಈ ಕೃತಿಯ ಸಾಹಿತ್ಯ ಅದ್ಭುತವಾಗಿದೆ.
ಜಾಣೆ ನಂಬಿದೆ ಇಸ್ಟೇಟ ರಾಣೀ ನೀನೊಲಿದೆನ್ನ
ಪಾಣಿಯೊಳಗೆ ಬಂದು ಕಾಣಿಸಮ್ಮ ಪ
ವಾಣಿ ಶ್ರೀಲಕುಮಿ ರುದ್ರಾಯಣಿಯರಿಗಿಂತ
ಕ್ಷೋಣಿಯೊಳಗೆ ಬಲು ಮಾನಿತೆ ನೀನಮ್ಮ ಅ.ಪ
ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ
ದನಕರು ಹೊಲಮನೆಯನು ಮಾರಿದೆ
ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ
ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ 1
ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ
ಕಡುಕಷ್ಟ ಕಡಲೋಳು ಮುಳುಗಿದೆನಮ್ಮ
ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ
ಒಡೆಯರ ಕಾಣೆ ಕೈಪಿಡಿದು ರಕ್ಷಿಸಮ್ಮ 2
ಎಷ್ಟಂತ ಹೇಳಲಿ ಮಡದಿಯ ಗೋಳಾಟ
ತಾಳಿ ಹೊರತುಎಲ್ಲಾ ಹಾಳಾಯಿತು |
ಸಾಲ ಬಹಳಾಯಿತು ಜೋಳಿಗೆ ಬಂದಿತು
ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ 3
ಚಾರರುಭಯರಲ್ಲಿ ಸೇರಿ ಬಂದಾಕ್ಷಣ
ಹಾರಿ ಹೋಗುವದಮ್ಮಾ ಪಕ್ಕಾರಂಗು
ಧಾರುಣೀಶರ ಮಧ್ಯ ತೋರೀದ ಸಮಯದಿ
ಆ ರಾಣಿ ವರ್ಗವ ಥರ ಥರ ನಡುಗಿಸುವಿ 4
ಎಕ್ಕದೊಳಗೆ ಎರಡೆಕ್ಕ ಬರಲು ನೀನು
ಪಕ್ಕನೆ ಬಂದು ಕಾಣಿಸಮ್ಮ
ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ
ರೊಕ್ಕ ಹಾಕಲು ಅವನ ಲೆಕ್ಕಿಸೆನಮ್ಮ 5
ಕಾಮಿತ ದಾಯಿನಿ ಕಾಮಿನಿ ಶಿರೋಮಣಿ
ಶ್ಯಾಮಸುಂದರ ಸಾರ್ವಭೌಮನ ರಾಣಿ
ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ
ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ 6
*ಶ್ರೀಮಂತ ಜೋಕರ... ಶ್ರೀ ಕೃಷ್ಣ
*ಪ್ರೇಮದ ಭಗಿನಿ.. ದುರ್ಗಾದೇವಿ
( ಶ್ರೀ ಕೃಷ್ಣಾವಾತರದ ಸಂದರ್ಭ)
*ಮುಕ್ಕಣ್ಣನ ಸಖ.. ಕುಬೇರ
ದುಶ್ಚಟಗಳನ್ನು ಬಿಡಿಸಿ.. ತಾಯಿಯ ಚರಣವನ್ನು ನಂಬಿ ನಡೆಯುವ, ಅವಳ ಕರುಣೆಯನ್ನು ಪಡೆಯುವ ನಿಟ್ಟಿನತ್ತ ಹೋಗುವ ಸಾಧನೆಯನ್ನು ಮಾಡಿಸು - ಎಂಬ ಪ್ರಾರ್ಥನೆಯನ್ನು ದಾಸರು ಮಾಡುತ್ತಾರೆ.
ಇಸ್ಪೇಟ್ ಆಡುವ ಸಂದರ್ಭದಲ್ಲಿ ಸೋತಾಗ.. ಮಿತ್ರರು.. ಸೋತೆ ಎಂದು ಅಪಹಾಸ್ಯ ಮಾಡಿದಾಗ.. ಏನ್ ಮಾಡೋದು.. ಇಸ್ಪೇಟ್ ರಾಣಿ ಕೈಕೊಟ್ಟಳು.. ಅಂತ ಹೇಳುತ್ತಾರೆ ದಾಸರು. ಆಗ ಹೊಳೆದ ಈ ಕೃತಿ...!! ತಾತ್ವಿಕ ಚಿಂತನೆಯತ್ತ ಹರಿಸುತ್ತದೆ ಈ ಕೃತಿ..
ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ಬಿಟ್ಟರೆ, ತಾಯಿ ಲಕ್ಷ್ಮೀ ನಮಗೆ ಜ್ಞಾನ, ಭಕ್ತಿ, ವೈರಾಗ್ಯ ಎನ್ನುವ ಸಂಪತ್ತನ್ನು ನೀಡಿ ರಕ್ಷಿಸುತ್ತಾಳೆ ಎಂಬ ಮಾರ್ಮಿಕವಾದ ಅರ್ಥ ಚಿಂತನೆಯನ್ನು ಮಾಡಿಸುವ ದಾಸರ ಈ ಕೃತಿ ಬಹು ವಿಶಿಷ್ಟವಾಗಿದೆ.
Негізгі бет Jane nambide ispet rani / ಜಾಣೆ ನಂಬಿದೆ ಇಸ್ಪೇಟ್ ರಾಣಿ / ಶ್ರೀ ಶ್ಯಾಮಸುಂದರ ದಾಸರ ಕೃತಿ.
Пікірлер: 27