#SatishJarkiholi#Belagavi#Tv6pro
ಮಹಾಮಾರಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಳೆ ರಾತ್ರಿ 8 ಗಂಟೆಯಿಂದ ಒಂದು ವಾರ ಲಾಕ್ಡೌನ್ಗೆ ಜಾರಿ ಮಾಡುವುದಾಗಿ ತಿಳಿಸಿದೆ. ಮತ್ತೊಂದೆಡೆ ಡೇಂಜರ್ ಝೋನ್ ಇರುವ ಜಿಲ್ಲೆಗಳಲ್ಲಿಯೂ ಲಾಕ್ಡೌನ್ ಜಾರಿ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಲಾಕ್ಡೌನ್ಗೆ ತಮ್ಮ ವಿರೋಧ ಇದೆ ಎಂದು ತಿಳಿಸಿದ್ದಾರೆ. ಲಾಕ್ಡೌನ್ ಜಾರಿಗೆ ನಮ್ಮ ವಿರೋಧವಿದೆ ಎಂದಿರುವ ಸತೀಶ್ ಜಾರಕಿಹೊಳಿ ಲಾಕ್ಡೌನ್ ನಿಂದ ಪರಿಹಾರ ಆಗಲ್ಲ.ನೀವು ಜನರನ್ನು ಎಷ್ಟು ಕೂಡಿ ಹಾಕ್ತಿರೋ ಅಷ್ಟು ಹೆಚ್ಚು ಕೊರೊನಾ ಬರುತ್ತೆ.ಜನರನ್ನು ಫ್ರಿಯಾಗಿ ಬಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಹೇಳಬೇಕು. ಲಾಕ್ಡೌನ್ ಜಾರಿ ಮಾಡಿದ್ರೆ ಜನಸಾಮಾನ್ಯರಿಗೆ ತೊಂದರೆ ಆಗುತ್ತೆ. ಲಾಕ್ಡೌನ್ ಘೋಷಣೆಯೊಂದೇ ಪರಿಹಾರ ಅಲ್ಲ ಎಂದು ತಿಳಿಸಿದ್ದಾರೆ.
Негізгі бет ಕರೋಶಿ ದರ್ಗಾ ಮುಂದೆ ಸುಡು ಬಿಸಿಲಿನಲ್ಲಿ ನನ್ನ ಮಲಗಿಸಿದ್ರು - ಸತೀಶ್ ಜಾರಕಿಹೊಳಿ||Satish Jarkiholi Tv6pro
Пікірлер: 26