#bhajan #dasarapadagalu #bolma
ಕುರುಡು ನಾಯಿ ಸಂತೆಗೆ ಬಂತಂತೆ||2||
ಅದು ಯಾಕೆ ಬಂತೋ ||ಕುರುಡು||
ಖಂಡ ಸಕ್ಕರೆ ಹಿತವಿಲ್ಲವಂತೆ
ಖಂಡ ಎಲುಬು ಕಡಿದಿತಂತೆ||ಖಂಡ||
ಹೆಂಡಿರ ಮಕ್ಕಳ ನೆಚ್ಚಿತಂತೆ||2||
ಕೊಂಡು ಹೋಗುವಾಗ ಯಾರಿಲ್ಲವಂತೆ
||ಕುರುಡು||
ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಲಿ ಇಕ್ಕಿದರಂತೆ||ಭರದಿ||
ಮರೆತರಿನ್ನು ವ್ಯರ್ಥವಂತೆ||2||
ನರಕದೊಳಗೆ ಬಿದ್ದಿತಂತೆ ||ಕುರುಡು||
ವೇದಶಾಸ್ತ್ರವನೋದಿತಂತೆ
ಗಾದೆಯ ಮಾಡಿ ಬಿಟ್ಟಿತಂತೆ||ವೇದ||
ಹಾದಿ ತಪ್ಪಿ ನಡೆದು ಯಮನ||2||
ಬಾಧೆಗೆ ತಾ ಗುರಿಯಾಯಿತಂತೆ ||ಕುರುಡು||
ನಾನಾ ಜನ್ಮವನೆತ್ತಿತಂತೆ
ಮಾನವನಾಗಿ ಹುಟ್ಟಿತಂತೆ||ನಾನಾ||
ಕಾನನಕಾನನ ತಿರುಗಿತಂತೆ||2||
ತಾನು ತನ್ನನೆ ಮರೆಯಿತಂತೆ ||ಕುರುಡು||
ಮಂಗನ ಕೈಯ ಮಾಣಿಕ್ಯದಂತೆ
ಹಾಂಗೂ ಹೀಂಗೂ ಕಳೆದೀತಂತೆ||ಮಂಗನ||
ರಂಗ ಪುರಂದರವಿಠಲನ ಮರೆತು||2||
ಭಂಗ ಬಹಳ ಪಟ್ಟಿತಂತೆ ||ಕುರುಡು||
ಅರ್ಥ. ಕುರುಡು ನಾಯಿಯೊಂದು ಸಂತೆಗೆ ಬಂದಿತು. ಆದರೆ ಅದು ಏಕೇ ಬಂದಿತು ಯಾರಿಗೂ ತಿಳಿಯದ ವಿಷಯವಾಗಿದೆ.
ಆಧ್ಯಾತ್ಮಿಕ ಅರ್ಥ. ನಾಯಿ ಅಂದರೆ ಭೂಮಿಗೆ ಬಂದ ಅಜ್ಞಾನಿಯಾದ ಮಾನವ ಜೀವಿ. ಸಂತೆ ಅಂದರೆ ಈ ಸಂಸಾರ. ಅದೆಷ್ಟೋ ಜೀವರು ಬಂದಿದ್ದಾರೆ. ಈ ಭೂಲೋಕಕ್ಕೆ ಜೀವರು ಏಕೇ ಬಂದರು ಅದೇ ದೊಡ್ಡ ಪ್ರಶ್ನೆ. ಉತ್ತರ ಸರಳ. ಜೀವರುಗಳ ಪ್ರಾರಬ್ಧ ಕರ್ಮಗಳಿಗೆ ತಕ್ಕಂತೆ ಪಾಪಗಳನ್ನು ಅನುಭವಿಸಲು ಜೀವರು ಸಂಸಾರವೆಂಬ ಸಂತೆಗೆ ಬಂದಿವೆ. ಪರಮಾತ್ಮನ ಬಗ್ಗೆ ತಿಳಿದುಕೊಳ್ಳದೆ ಅಜ್ಞಾನಿ ಎಂದು ಕರೆಸಿಕೊಂಡು ಕುರುಡು ನಾಯಿ ಎನಿಸಿಕೊಂಡಿವೆ.
ಖಂಡ ಸಕ್ಕರೆ ಹಿತವಲ್ಲವಂತೆ
ತುಂಡು ಎಲಬು ಕಡಿದಿತಂತೆ
ಹೆಂಡಿರ ಮಕ್ಕಳ ನೆಚ್ಚಿತ್ತಂತೆ
ಕೊಂಡು ಹೋಗುವಾಗ ಯಾರಿಲ್ಲವಂತೆ . ೧.
ಅರ್ಥ. ಭೂಲೋಕಕ್ಕೆ ಬಂದ ನಾಯಿಗೆ ಕಲ್ಲು ಸಕ್ಕರೆ ರುಚಿಸುವದಿಲ್ಲ ವಂತೆ. ಆದಕಾರಣ ಎಲುಬಿನ ತುಂಡನ್ನು ಕಡಿದು ತಿಂದಿತು. ಸಂಸಾರದಲ್ಲಿ ತನ್ನ ಹೆಂಡತಿ ಮಕ್ಕಳನ್ನು ಪ್ರೀತಿಯಿಂದ ಮೋಹದಿಂದ ಕಂಡಿತು. ಯಮದೂತರು ಕರೆದು ಕೊಂಡು ಹೋಗುವಾಗ ಅದನ್ನು ಕಾಪಾಡಲು ಯಾರೂ ಇಲ್ಲವಂತೆ.
ಆಧ್ಯಾತ್ಮಿಕ ಅರ್ಥ. ಭೂಲೋಕದಲ್ಲಿ ಜನಿಸಿದ ನಾಯಿ ಎನಿಸಿಕೊಂಡ ಜೀವನು ಪರಮಾತ್ಮನ ಜ್ಞಾನವಿಲ್ಲದೆ ರಾಜಸ ಮತ್ತು ತಾಮಸ ಗುಣಗಳನ್ನೇ ಮೆಚ್ಚುತ್ತಾನೆ. ಸಾಧು ಜನರ ಹಿತವಾಕ್ಯಗಳು, ಸಾಧನೆಯ ಮಾರ್ಗದರ್ಶನ ಮಾಡುವ ಸಾತ್ವಿಕ ಗುಣವು ಈ ನಾಯಿಗೆ ರುಚಿಸುವದಿಲ್ಲ. ದಾಸರು ಈ ಸಾತ್ವಿಕ ಗುಣವನ್ನೇ ಖಂಡಸಕ್ಕರೆ ಎಂದು ಕರೆದಿರುವರು. ಮುಕ್ತಿ ಸಾಧನೆಯ ಸಕ್ಕರೆ ಬೇಡವಾಗಿ ರಾಜಸ ತಾಮಸ ಗುಣಕ್ಕೆ ತಕ್ಕಂತೆ ಎಲುಬು ಎಂಬ ನಿಷಿದ್ಧ ಪದಾರ್ಥವನ್ನು ತಿನ್ನುತ್ತಾನೆ.
ಈ ಸಂಸಾರದಲ್ಲಿ ಬಿದ್ದು ಹೆಂಡತಿ ಮಕ್ಕಳೇ ಪ್ರೀತಿಯವರು ಆಗುವರು. ಇವರ ಮೇಲ್ವಿಚಾರಣೆಯಲ್ಲಿ ಜೀವನ ಮನಸ್ಸು ಮುಕ್ತಿ ಸಾಧನೆಗೆ ಕಡೆಗೆ ಹರಿಯುವದಿಲ್ಲ. ಜಗತ್ತಿನ ಮಾಯೆಯಲ್ಲಿ ಸಿಲುಕಿ ಪಾರಮಾರ್ಥಿಕ ಸುಖವನ್ನು ಬಿಟ್ಟು ಲೌಕಿಕದಲ್ಲಿ ದೈಹಿಕ ಸುಖವನ್ನೇ ಮೆಚ್ಚುವನು. ಹೆಣ್ಣು, ಹೊನ್ನು, ಮಣ್ಣಿಗಾಗಿ ಜೀವನ ಹಾಲು ಮಾಡಿಕೊಳ್ಳುತ್ತಾನೆ. ತ್ರಿಷಣ ಗಳಿಗೆ ಬಲಿಯಾಗುತ್ತಾನೆ.
ಇಷ್ಟೆಲ್ಲಾ ಗಳಿಸಿ ಹೆಂಡತಿ ಮಕ್ಕಳು ಬಂಧು ಬಳಗದವರಿಗೆ ಸಹಾಯ ಮಾಡಿದರೂ ಕೊನೆಗೆ ಮರಣ ಸಮಯದಲ್ಲಿ ಇವನನ್ನು ಯಾರೂ ಕಣ್ಣೆತ್ತಿ ನೋಡುವದಿಲ್ಲ. ಏಕೆಂದರೆ ಮುಪ್ಪಿನ ಕಾಲದಲ್ಲಿ ಇವನಿಂದ ಬಳಗದವರಿಗೆ ಯಾವ ಲಾಭ ಇರುವದಿಲ್ಲ. ಮರಣ ಹೊಂದಿದಮೇಲೆ ಮುಟ್ಟಲೂ ಹಿಂಜರಿದು ದೂರ ಕೂಡುವರು. ಯಾರೂ ಬರುವದಿಲ್ಲ.ಅವನ ಹಿಂದೆ ಬರುವದು ಅಂದರೆ ಜೀವದ ಹಿಂದೆ ದೇಹ ಮನದ ಮುಖಾಂತರ ಮಾಡಿದ ಕರ್ಮ ಮಾತ್ರ ಎಂದು ದಾಸರು ವರ್ಣಿಸಿದ್ದಾರೆ.
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Негізгі бет kurudu nayi santege bantante |ಕುರುಡು ನಾಯಿ ಸಂತೆಗೆ ಬಂತಂತೆ
No video
Пікірлер: 147