04-09-2024 ರಂದು ಅಧ್ಯಾತ್ಮವಿದ್ಯಾಪ್ರವೀಣ ಡಾ. ಕೆ.ಜಿ.ಸುಬ್ರಾಯ ಶರ್ಮರಿಂದ ಅಚ್ಚ ಕನ್ನಡದಲ್ಲಿ ಪ್ರವಚನ. ಭುವಿವೇದಾಂತೈಕ ಶ್ರೇಷ್ಠನಿಷ್ಠ ಇತ್ಯಾದಿ ಅನೇಕ ಬಿರುದಾಂಕಿತರೂ ಆದ ವೇದಬ್ರಹ್ಮಶ್ರೀ ವಿದ್ವಾನ್ ಡಾ. ಕೆ.ಜಿ ಸುಬ್ರಾಯಶರ್ಮಾಜಿ ಯವರಿಂದ ನೈಷ್ಕರ್ಮ್ಯಸಿದ್ಧಿ 02- 27 ( 106) ಉಪನ್ಯಾಸಮಾಲಿಕೆ . ಪೂಜ್ಯ ಶರ್ಮಾಜಿಯವರು ಕರ್ನಾಟಕ ಶಂಕರರೂ ಕನ್ನಡ ಶಂಕರರೆಂದೇ ಪ್ರಸಿದ್ಧವಾಗಿರುವ ಆದರ್ಶ ಯತಿವರೇಣ್ಯರಾಗಿಯೂ, ಮಹಾತಪಸ್ವಿಗಳಾಗಿಯೂ, ಬ್ರಹ್ಮನಿಷ್ಠರಾಗಿಯೂ ಇದ್ದ ಹೊಳೆನರಸೀಪುರದ ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳ ಬಳಿ ೧೬ ವರ್ಷಗಳಕಾಲ ಸತತವಾಗಿ ಅಂತೇವಾಸಿಗಳಾಗಿ ಅಖಂಡ ಸೇವೆ ಸಲ್ಲಿಸಿರುವ ಮಹಾತ್ಮರು. ಇಂದಿಗೂ ತಮ್ಮ ಇಳಿವಯಸ್ಸಿನಲ್ಲಿಯೂ ಕೊಂಚವೂ ವಿಚಲಿತರಾಗದೆ ಪ್ರತಿನಿತ್ಯ ಸತತವಾಗಿ , ನಿಃಸ್ವಾರ್ಥವಾಗಿ ತಮ್ಮ ಗುರುಗಳಿಂದ ಪ್ರೇರೇಪಿಸಲ್ಪಟ್ಟು ಪ್ರವಚನ ಸೇವೆಯನ್ನು ಮಾಡುತ್ತ ಅನೇಕ ಲಕ್ಷಾಂತರ ವೇದಾಂತ ಆಸಕ್ತರನ್ನು ಸಾಧಕರನ್ನಾಗಿಯೂ, ಜಿಜ್ಞಾಸುಗಳನ್ನ ಮುಮುಕ್ಷುಗಳನ್ನಾಗಿಯೂ, ಮುಮುಕ್ಷುಗಳನ್ನು ಮುಕ್ತರನ್ನಾಗಿಯೂ ಮಾಡಿ ಮಾನವ ಜನ್ಮದ ಸಾರ್ಥಕತೆಗೆ ಕಾರಣರಾಗಿದ್ದಾರೆ.
ನಮ್ಮೆಲ್ಲರಿಗೂ ಅವರಿಂದ ಸರಳ, ಅನುಭವಪೂರಿತ ಪ್ರಾಸಂಗಿಕ ಉದಾಹರಣೆಗಳೊಂದಿಗೆ ಅನುಗ್ರಹಿಸಿರುವ ಉಪನ್ಯಾಸಗಳನ್ನು ಶ್ರವಣಮಾಡಿದವರೆಲ್ಲರಿಗೂ , ನಾನು ಇಂಥವರ ಶಿಷ್ಯ ಎಂಬ ಗರ್ವ, ಹೆಮ್ಮೆ ಸಹಜ. ಇಷ್ಟಕ್ಕೂ ಕಾರಣ ಪೂಜ್ಯ ಗುರುಗಳು ತಮ್ಮ ಆರಾಧ್ಯದೈವ ಕರ್ನಾಟಕ ಶಂಕರ ಪ.ಪೂ. ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳಿಂದ ಸಂಸ್ಕೃತ, ಇಂಗ್ಲಿಷ್, ವ್ಯಾಕರಣ, ಕಾವ್ಯ, ಪುರಾಣಾದಿಗಳು, ಶಾಂಕರಾದ್ವೈತವೇದಾಂತ, ಮುಂತಾದವುಗಳನ್ನು ಏಕಸಂಧಿಗ್ರಾಹಿಯಾಗಿ, ನಿಷ್ಠೆಯಿಂದ " ಬ್ರಹ್ಮಚಾರೀ ಆಚಾರ್ಯಕುಲವಾಸೀ " ಎಂಬ ಛಾಂದೋಗ್ಯ ನುಡಿಯಂತೆ ೧೬ ವರ್ಷಗಳಕಾಲ ನಿರಂತರ ಗುರುಸೇವೆ, ತಪಸ್ಸುಮಾಡಿದ ಪ್ರತಿಫಲ.
ಇದು ಖಂಡಿತಾ ನಮ್ಮೆಲ್ಲರ ಭಾಗ್ಯ. ಇಂದಿಗೂ ಕೊಂಚವೂ ಆಲಸ್ಯಪಡದೆ ಮಳೆ ಇರಲಿ, ಗಾಳಿಇರಲಿ, ಛಳಿಇರಲಿ ಲೆಕ್ಕಿಸದೆ ಉಪನ್ಯಾಸಕ್ಕೆ ಆಹ್ವಾನಿಸಿದವರೆಲ್ಲರಿಗೂ ಕಿಂಚಿತ್ತೂ ಅವರಿಂದ ಏನನ್ನೂ ಅಪೇಕ್ಷಿಸದೆ, ಕೇವಲ ನಿಮ್ಮ ಕಿವಿ - ಮನಸ್ಸು ಕೊಡಿ ಸಾಕೆಂದು ಪ್ರೀತಿಯಿಂದ , ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ( ಕನಿಷ್ಠ ೩, ಹೆಚ್ಚೆಂದರೆ ೧೨ ಕಡೆಗಳಲ್ಲಿ) ದಿನವೂ ಶ್ರಾವಣಿಸಿ ವೀರ ವೇದಾಂತಿಯಾಗಿ ನಡೆದಾಡುವ ವೇದಾಂತ ವಿಶ್ವಕೋಶವಾಗಿದ್ದಾರೆ. ನಮ್ಮ ಗುರುಗಳ ಉಪನ್ಯಾಸ, ಲೇಖನಗಳೇ ಒಂದು ಮಾದರಿ. ಕೇಳುವವರ( ಶ್ರೋತೃಗಳ ) ಕಣ್ಣುಗಳನ್ನೇ ಪರೀಕ್ಷಿಸುತ್ತಾ, ಅವರ ಅಧಿಕಾರಿತ್ವವನ್ನು ಗುರುತಿಸಿ, ತಿಳಿದು, ಅವರಿಗೆ ಯಾವ ಹಂತದಲ್ಲೂ ನಿರಾಸಕ್ತಿ ಬಾರದಂತೆ, ' ಅರ್ಥವಾಯಿತೇ ?' ಅಂತ ಮಧ್ಯೆ ಮಧ್ಯೆ ಕೇಳಿ ; ' ಇಲ್ಲ ನಿಮಗೆ ಅರ್ಥವಾಗಿಲ್ಲ, ಎಲ್ಲಿ ಹೇಳಿ..... ಇನ್ನೊಂದ್ಸಲ ಹೇಳ್ತೇನೆ, ದಯಮಾಡಿ ಗಮನವಿಟ್ಟು ಕೇಳಿ' ಎಂದು ಸ್ವಲ್ಪವೂ ಬೇಜಾರುಮಾಡಿಕೊಳ್ಳದೆ ಶಿಷ್ಯವಾತ್ಸಲ್ಯದಿಂದ ನಮಗೋಸ್ಕರ ಗಂಟಲಿನ ಆಯಾಸವನ್ನೂ ಲೆಕ್ಕಿಸದೆ ಅರ್ಥೈಸುವುದು ಒಂದು ಅಪೂರ್ವ ಕಲೆ. ಪೂಜ್ಯ ಗುರುಗಳ ಬಗ್ಗೆ ಹೇಳುವುದಾದರೆ ಒಂದೇ, ಎರಡೇ ? ಉದಾಹರಣೆಗಳೋ ಅತ್ಯದ್ಭುತ, ಸಮಯೋಚಿತ. ಅಶರೀರತ್ವದ ಸಾಕಾರ ಮೂರ್ತಿ.
ಇನ್ನು ಗ್ರಂಥರಚನೆ, ಶ್ಲೋಕರಚನೆ, ವಾಕ್ಯ ಜೋಡಣೆ, ಮುಂದಾಲೋಚನೆ, ಸಮಯಪಾಲನೆ ಮುಂತಾದವುಗಳಿಗೆ ಅವರೇ ಸಾಠಿ. ಪೂಜ್ಯ ಗುರುಗಳ ಶ್ರೀಮತಿ ಮಾತೃಸ್ವರೂಪಿ ರಾಜೇಶ್ವರೀ ಶರ್ಮರ ಸಹಕಾರಕ್ಕೆ ನಾವೆಲ್ಲರೂ ಆಭಾರಿ. ನಮ್ಮ ಗುರುಗಳು ನೂರ್ಕಾಲ ಆರೋಗ್ಯವಾಗಿ ಬಾಳಲಿ, ಪ್ರವಚನ ಸೇವೆ, ಮಾರ್ಗ ದರ್ಶನ, ನಿರಂತರವಾಗಿ ಮೂಡಿಬರಲಿ ಎಂದು ಭಕ್ತಿಯಿಂದ ಭಗವಂತನಲ್ಲಿ ಬೇಡೋಣ.
ಒಟ್ಟಿನಲ್ಲಿ ಶ್ರೀ ಶ್ರೀಗಳ ಪರಿಶುದ್ಧ ಶಾಂಕರಾದ್ವೈತವೇದಾಂತ ಪ್ರಚಾರದ ಕನಸನ್ನು ಇಂದಿಗೂ ತಮ್ಮ ಮೇಧಾಶಕ್ತಿ, ಧಾರಣ ಶಕ್ತಿ, ಪ್ರವಚನ ಪಟುತ್ವದ ಮೂಲಕ ಜೀವಂತವಾಗಿ, ವೀರ ವೇದಾಂತಿಯಾಗಿ ಸಾರ್ಥಕಗೊಳಿಸಿರುವ ಆಧುನಿಕ ಶಂಕರರಿಗೆ ನಮೋ ನಮಃ.
ಯಸ್ಯದೇವೇ ಪರಾಭಕ್ತಿಃ ಯಥಾದೇವೇ ತಥಾ ಗುರೌ |
ತಸ್ಯೈತೇ ಕಥಿತಾಹ್ಯರ್ಥಾಃ ಪ್ರಕಾಶ್ಯಂತೇ ಮಹಾತ್ಮನಃ ||
On this day , 04-09-2024 Bhagavan Sureshwaracharya the direct disciple of Bhagavatpada Shankara, has authored Naishkarmya Siddhi 02 - 27 (106) which is a concentrated tonic in Vedantha explaining - for liberation there is no need of Karma as stated in Shrutis, अज्ञानहानिमात्रत्वात् मुक्तॆः कर्म न साधनम् । कर्मापमार्श्टिनाज्ञानं तमसीवॊत्थितं तमः ॥ नै. सि. that only removal (baadha) of ignorance is the purpose of all Vedanthas. Naishkarmya Siddhi is one of the seminal texts on Advaita Vedanta written by Sri Sureshwaracharya, the celebrated disciple of Adi Shankaracharya Bhagavadpada.Brahmavidya- Atmavidya is vastutantra jnaana, not kartrutantra. Introduction in English by MahamahOpadhyaya Dr.K.G.Subraya Sharmaji, song Sung Chitradurga Sanjeeva Murthy , under the able guidance of Karnataka Kalashree ubhayagana vidushi Dr. Shyamala G Bhave , Recorded, edited, Produced and published by Chitradurga Sanjeeva Murthy, Basavanagudi, Bangalore, ALL RIGHTS RESERVED, casmurthy@gmail.com. 98860 51222, Please subscribe and spread bliss to all. Please visit - www.kgssharmaa.in and kgssharma.in, you tube - chitradurga sanjeeva murthy.
Негізгі бет SURESHVARACHARYA'S NAISHKARMYASIDDHI 1- 106 ನೈಷ್ಕರ್ಮ್ಯಸಿದ್ಧಿ ಪ್ರವಚನ Kannada Dr.K.G.SUBRAYA SHARMAJI
Пікірлер: 1